ದ್ವಿತೀಯ ಟ್ವೆಂಟಿ-20: ಭಾರತ ವಿರುದ್ದ ಶ್ರೀಲಂಕಾಕ್ಕೆ ಜಯ

Update: 2021-07-28 18:09 GMT
photo: twitter/@akashvanisports

ಕೊಲಂಬೊ: ಧನಂಜಯ ಡಿ’ಸಿಲ್ವಾ ಹಾಗೂ ಮಿನೊದ್ ಭಾನುಕ ಅವರ ಸಾಂದರ್ಭಿಕ ಬ್ಯಾಟಿಂಗ್  ನೆರವಿನಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ 2ನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು 4 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.

ಗೆಲ್ಲಲು 133 ರನ್ ಗುರಿ ಪಡೆದ ಶ್ರೀಲಂಕಾ ತಂಡವು 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಭಾನುಕಾ 36 ರನ್ ಗಳಿಸಿದರೆ, ಧನಂಜಯ ಔಟಾಗದೆ 40 ರನ್ (34 ಎಸೆತ)ಗಳಿಸಿದರು. ಭಾರತದ ಪರ ಕುಲದೀಪ್ ಯಾದವ್ (2-30)ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು ಆಫ್ ಸ್ಪಿನ್ನರ್ ಅಕಿಲ ದನಂಜಯ ನೇತೃತ್ವದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಶ್ರೀಲಂಕಾ ಬೌಲರ್ ಗಳು  ಭಾರತ ಕ್ರಿಕೆಟ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 132 ರನ್ ಗೆ ನಿಯಂತ್ರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News