ಇಪ್ಪತ್ತೆರಡು ವರ್ಷದ ಯುವಕನ ಥಳಿಸಿ ಹತ್ಯೆ: 8 ಮಂದಿಯ ವಿರುದ್ಧ ಪ್ರಕರಣ ದಾಖಲು
Update: 2021-09-12 06:55 GMT
ಹೊಸದಿಲ್ಲಿ,ಸೆ. 11: ಇಪ್ಪತ್ತೆರೆಡು ವರ್ಷದ ಯುವಕನೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಸಮುದಾಯಗಳ ಎರಡು ಗುಂಪುಗಳ ನಡುವಿನ ದ್ವೇಷದಿಂದ ಈ ದಾಳಿ ನಡೆದಿದೆ ಎಂದು ಹೇಳಿರುವ ಪೊಲೀಸರು, ಘಟನೆಯ ಕೋಮುವಾದಿ ಆಯಾಮವನ್ನು ನಿರಾಕರಿಸಿದ್ದಾರೆ.
ಬಾನತ್ ಬಸ್ ಸ್ಟಾಂಡ್ನಲ್ಲಿ ಸಮೀರ್ ಚೌಧರಿ ನಿಂತಿದ್ದಾಗ ಗುಂಪು ದೊಣ್ಣೆ, ರಾಡ್ನಿಂದ ದಾಳಿ ನಡೆಸಿದೆ ಎಂದು ಸಮೀರ್ ಚೌಧರಿಯ ಕುಟುಂಬ ಆರೋಪಿಸಿದೆ. ಆರೋಪಿಗಳಾದ ವತನ್ರಾಜ್, ವರ್ದನ್, ಅಕ್ಷಯ್, ರಾಜ್, ಆಶಿಶ್, ಚಿಂತು ಆಲಿಯಾಸ್ ಆಯುಷ್ ರಾಣಾ ಹಾಗೂ ಬೂಂದು ವಿರುದ್ಧ ಹತ್ಯೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ.