ಬಿಜೆಪಿ ನಾಯಕ ಕಿರೀತ್ ಸೋಮಯ್ಯ ವಿರುದ್ಧ 100 ಕೋ.ರೂ. ಮಾನನಷ್ಟ ಪ್ರಕರಣ ದಾಖಲು

Update: 2021-09-22 03:28 GMT

ಮುಂಬೈ,ಸೆ.21: ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಅವರು ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ವಿರುದ್ಧ 100 ಕೋ.ರೂ.ಗಳ ಮಾನನಷ್ಟ ಪ್ರಕರಣವನ್ನು ದಾಖಲಿಸಿದ್ದಾರೆ.

ತಾನು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ಅಕ್ರಮ ಕಟ್ಟಡ ನಿರ್ಮಾಣದಲ್ಲಿ ಭಾಗಿಯಾಗಿದ್ದೇನೆ ಎಂದು ಕಿರೀತ್ ಸೋಮಯ್ಯ ಜೂನ್ ನಲ್ಲಿ ಟ್ವೀಟ್ವೊಂದರಲ್ಲಿ ಆರೋಪಿಸಿದ್ದರು ಮತ್ತು ಇದು ತನಗೆ ಮಾನನಷ್ಟವನ್ನುಂಟು ಮಾಡಿದೆ. ಸೋಮಯ್ಯ ಉಲ್ಲೇಖಿಸಿರುವ ನಿರ್ಮಾಣಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪರಬ್ ದೂರಿನಲ್ಲಿ ಹೇಳಿದ್ದಾರೆ.

ಅವಮಾನಕಾರಿ ಟ್ವೀಟ್ ಮತ್ತು ವೀಡಿಯೊವನ್ನು ಅಳಿಸುವಂತೆ ಸೂಚಿಸಿ ಪರಬ್ ಸೆ.14ರಂದು ಸೋಮಯ್ಯಗೆ ಕಾನೂನು ನೋಟಿಸ್ ಕಳುಹಿಸಿದ್ದರಾದರೂ ಅವರು ಅದಕ್ಕೆ ಉತ್ತರಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News