ಸಂಸದ ಉವೈಸಿ ದಿಲ್ಲಿ ನಿವಾಸದಲ್ಲಿ ದಾಂಧಲೆ ಘಟನೆ: ಐವರನ್ನು ಬಂಧಿಸಿದ ಪೊಲೀಸರು

Update: 2021-09-21 17:07 GMT
photo: twitter

ಹೊಸದಿಲ್ಲಿ: ದಿಲ್ಲಿಯ ಅಶೋಕ ರಸ್ತೆಯಲ್ಲಿರುವ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರ ಅಧಿಕೃತ ನಿವಾಸದಲ್ಲಿ ದಾಂಧಲೆ ನಡೆಸಿದ್ದಕ್ಕಾಗಿ ಹಿಂದೂ ಸೇನೆ ಎಂಬ ಗುಂಪಿನವರು ಎಂದು ಹೇಳಿಕೊಂಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಈ ಘಟನೆ ನಡೆದಿತ್ತು.

ಘಟನೆಯಲ್ಲಿ ಭಾಗಿಯಾದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಹೊಸದಿಲ್ಲಿ) ದೀಪಕ್ ಯಾದವ್ ತಿಳಿಸಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗಿದೆ.

ವರದಿಗಳ ಪ್ರಕಾರ, ಸುಮಾರು ಏಳ ರಿಂದ ಎಂಟು ಜನರು ಉವೈಸಿ ಅವರ ಅಧಿಕೃತ ನಿವಾಸಕ್ಕೆ ಆಗಮಿಸಿ ಬಂಗಲೆಯ ಹೊರಗಿದ್ದ ನಾಮಫಲಕ, ದೀಪ ಹಾಗೂ  ಕಿಟಕಿ ಗಾಜನ್ನು ಪುಡಿಮಾಡಿದ್ದರು.

ಘಟನೆಯ ಸಮಯದಲ್ಲಿ ಹೈದರಾಬಾದ್ ರಾಜಕಾರಣಿ ನಿವಾಸದಲ್ಲಿರಲಿಲ್ಲ ಎಂದು ವರದಿಯಾಗಿದೆ…

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News