ರಾಜಸ್ಥಾನ ಸಂಪುಟ ವಿಸ್ತರಣೆ ಕಸರತ್ತು:ಸೋನಿಯಾ ಗಾಂಧಿ ಭೇಟಿಯಾದ ಅಶೋಕ್ ಗೆಹ್ಲೋಟ್

Update: 2021-11-11 08:08 GMT

ಹೊಸದಿಲ್ಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.  ಸಚಿನ್ ಪೈಲಟ್ ಅವರೊಂದಿಗಿನ ದೀರ್ಘಕಾಲದ ಹಗೆತನವನ್ನು ಕೊನೆಗೊಳಿಸಲು ಗೆಹ್ಲೋಟ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ ಎಂಬ ಸುದ್ದಿಗೆ ಪುಷ್ಟಿ ನೀಡಿದ್ದಾರೆ..

ಬುಧವಾರ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸಚಿನ್ ಪೈಲಟ್ ಅವರ ಬೆಂಬಲಿಗರಿಗೆ ತಮ್ಮ ಸಚಿವಾಲಯದಲ್ಲಿ ಅವಕಾಶ ಕಲ್ಪಿಸುವಂತೆ ಗೆಹ್ಲೋಟ್ ಗೆ ಒತ್ತಾಯಿಸಿದ್ದರು ಎಂದು ವರದಿಯಾಗಿದೆ.

ಸೋನಿಯಾ ಗಾಂಧಿಯವರೊಂದಿಗೆ ಗೆಹ್ಲೋಟ್ ಅವರ ಸಭೆಯು "ರಾಜಸ್ಥಾನದ ಸಚಿವ ಸಂಪುಟವನ್ನು ವಿಸ್ತರಿಸುವುದು ಹಾಗೂ  ರಾಜ್ಯ ನಿಗಮಗಳ ಅಧ್ಯಕ್ಷರನ್ನು ನೇಮಿಸುವುದಕ್ಕೆ ಸಂಬಂಧಿಸಿದೆ" ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಒಂದು ವರ್ಷದ ಹಿಂದೆ ತನ್ನ ಬಂಡಾಯವನ್ನು ಕೈಬಿಡಲು ಒಪ್ಪಿಕೊಂಡಾಗ ಪೈಲಟ್‌ಗೆ ನೀಡಿದ ಪ್ರಮುಖ ಭರವಸೆಗೆ ಅನುಗುಣವಾಗಿ ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನರ್ರಚನೆಯನ್ನು ತಕ್ಷಣವೇ ನಡೆಯಬೇಕೆಂದು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News