×
Ad

ತೆಲಂಗಾಣ:ಸಿದ್ದಿಪೇಟೆ ಜಿಲ್ಲಾಧಿಕಾರಿ ವೆಂಕಟರಾಮಿ ರೆಡ್ಡಿ ರಾಜೀನಾಮೆ, ಟಿಆರ್‌ಎಸ್‌ಗೆ ಸೇರ್ಪಡೆ ಸಾಧ್ಯತೆ

Update: 2021-11-16 11:52 IST

ಹೈದರಾಬಾದ್: ಸಿದ್ದಿಪೇಟೆ ಜಿಲ್ಲಾಧಿಕಾರಿ ಪಿ. ವೆಂಕಟರಾಮಿ ರೆಡ್ಡಿ ಅವರು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸೇರಲು ಸೋಮವಾರ ಐಎಎಸ್ ತ್ಯಜಿಸಿದ್ದಾರೆ.

ಸೆಪ್ಟೆಂಬರ್ 2022 ರಲ್ಲಿ ನಿವೃತ್ತಿ ಹೊಂದಬೇಕಿದ್ದ ರೆಡ್ಡಿ ಸ್ವಯಂ ನಿವೃತ್ತಿಯನ್ನು ಆರಿಸಿಕೊಂಡರು. ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸಲಾಯಿತು ಹಾಗೂ  ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಬಿಡುಗಡೆ ಮಾಡಲಾಯಿತು.

ತೆಲಂಗಾಣದ ತ್ವರಿತ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪ್ರಯತ್ನಗಳಿಗೆ ಸೇರಲು ಅಧಿಕಾರಶಾಹಿಯನ್ನು ತ್ಯಜಿಸಲು ನಿರ್ಧರಿಸಿದ್ದೇನೆ ಎಂದು ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News