ಶ್ರೀನಗರ: ಶಂಕಿತ ಉಗ್ರರ ಗುಂಡಿಗೆ ನಾಗರಿಕ ಸಾವು, ಪೊಲೀಸ್ ಗೆ ಗಾಯ

Update: 2021-12-22 17:37 GMT
ಸಾಂದರ್ಭಿಕ ಚಿತ್ರ:PTI

ಶ್ರೀನಗರ, ಡಿ. 22: ಕಾಶ್ಮೀರ ಕಣಿವೆಯಲ್ಲಿ ಬುಧವಾರ ನಿಮಿಷಗಳ ಒಳಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಶಂಕಿತ ಉಗ್ರರು ಗುಂಡಿಗೆ ಓರ್ವ ನಾಗರಿಕ ಮೃತಪಟ್ಟಿದ್ದಾರೆ ಹಾಗೂ ಪೊಲೀಸರೊಬ್ಬರನ್ನು ಗಾಯಗೊಂಡಿದ್ದಾರೆ. ನಗರದ ನವಕಾಡಲ್ ಪ್ರದೇಶದಲ್ಲಿ ಶಂಕಿತ ಉಗ್ರರು ಹಾರಿಸಿದ ಗುಂಡಿಗೆ ನಾಗರಿಕರೋರ್ವರು ಸಾವನ್ನಪ್ಪಿದ್ದಾರೆ. ‌

ಮೃತಪಟ್ಟ ನಾಗರಿಕನನ್ನು ಶ್ರೀನಗರದ ನವಕಾಡಲ್ ಪ್ರದೇಶದ ನಿವಾಸಿ ರೌಫ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವೇ ನಿಮಿಷಗಳ ಅಂತರದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಶಂಕಿತ ಉಗ್ರರು ಬಿಜ್ಬೆಹರಾ ಆಸ್ಪತ್ರೆಯ ಹೊರಗೆ ಎಎಸ್ಐ ಮುಹಮ್ಮದ್ ಅಶ್ರಫ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. 

ಇದರಿಂದ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಉಗ್ರರನ್ನು ಬಂಧಿಸಲು ಈ ಪ್ರದೇಶಗಳನ್ನು ಸುತ್ತುವರಿಯಲಾಗಿದೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News