ಅಲಿಗಢ: ಧರ್ಮ ಸಂಸದ್ ರದ್ದುಗೊಳಿಸುವಂತೆ ಎಎಂಯುನ ಮಾಜಿ ವಿದ್ಯಾರ್ಥಿಗಳ ಮನವಿ

Update: 2022-01-07 17:31 GMT

ಅಲಿಗಢ, ಜ. 6: ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ವಾತಾವರಣ ಕೆಡುವ ಸಾಧ್ಯತೆ ಇರುವುದರಿಂದ ಪ್ರಸ್ತಾವಿತ ಧರ್ಮ ಸಂಸದ್ ಕಾರ್ಯಕ್ರಮವನ್ನು ಇಲ್ಲಿ ನಡೆಸದಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ನಾಯಕ ಸಲ್ಮಾನ್ ಇಮ್ತಿಯಾಝ್ ನೇತೃತ್ವದ ನಾಗರಿಕರ ಗುಂಪು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. 

ಪ್ರಸಕ್ತ ರಾಜಕೀಯದಲ್ಲಿ ಸಂತರ ಪಾತ್ರದ ಕುರಿತಂತೆ ಅಲಿಗಢದಲ್ಲಿ ಜನವರಿ 22-23ರಂದು ಇನ್ನೊಂದು ಧರ್ಮ ಸಂಸದ್ ನಡೆಸಲು ಸನಾತನ ಹಿಂದು ಸೇವಾ ಸಂಸ್ಥಾನ ಪ್ರಸ್ತಾವಿಸಿತ್ತು. ಆದರೆ, ಇಂತಹ ಕಾರ್ಯಕ್ರಮ ಆಯೋಜಿಸುವ ಬಗ್ಗೆ ನಾವು ಯಾವುದೇ ಲಿಖಿತ ಮನವಿ ಸ್ವೀಕರಿಸಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಆದರೆ, ಅಲಿಗಢದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸನಾತನ ಹಿಂದೂ ಸೇವಾ ಸಂಸ್ಥಾನದ ಕಾರ್ಯಕ್ರಮ ಆಯೋಜನಾ ಅಧಿಕಾರಿ ಅಶೋಕ್ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News