ಉಳ್ಳಾಲ: ಮುಹಮ್ಮದ್ ತ್ವಾಹೀರ್ ನಿಧನ
Update: 2022-01-13 10:24 GMT
ಉಳ್ಳಾಲ: ಇಲ್ಲಿನ ಮುಕಚೇರಿ ನಿವಾಸಿ, ಉದ್ಯಮಿ ಮುಹಮ್ಮದ್ ತ್ವಾಹೀರ್ (54) ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸರಳ, ಸ್ನೇಹಮಯಿ ಹಾಗು ಪರೋಪಕಾರಿ ವ್ಯಕ್ತಿತ್ವದ ತ್ವಾಹೀರ್ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಂಗಳೂರಿನ ಹಲವು ಸಮಾಜಸೇವಾ, ಧಾರ್ಮಿಕ ಸಂಘಟನೆಗಳು ಹಾಗು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಹಕರಿಸುತ್ತಿದ್ದರು.