ಬಿಪಿನ್‌ ರಾವತ್‌ ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಪೈಲಟ್‌ ದೋಷವೇ ಕಾರಣ: ತನಿಖಾ ತಂಡದ ವರದಿ

Update: 2022-01-14 15:28 GMT

ಹೊಸದಿಲ್ಲಿ: ಸಶಸ್ತ್ರ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ದುರ್ಘಟನೆಗೆ ಪೈಲಟ್‌ ದೋಷವೇ ಕಾರಣ ಎಂದು  ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡದ ಪ್ರಾಥಮಿಕ ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ ಎಂದು NDTV ವರದಿ ಮಾಡಿದೆ.

ಮೋಡಗಳ ಮೂಲಕ ಹೆಲಿಕಾಪ್ಟರ್‌ ಕಣಿವೆಗೆ ಪ್ರವೇಶಿಸುತ್ತಿದ್ದಂತೆ ಉಂಟಾದ ಅನಿರೀಕ್ಷಿತ ಹವಾಮಾನ ಬದಲಾವಣೆಯು ಪೈಲಟ್‌ ಗೊಂದಲಕ್ಕೆ ಕಾರಣವಾಗಿದೆ ಎಂದು ತನಿಖಾ ತಂಡ ಕಂಡು ಹಿಡಿದಿದೆ. 

ಹೆಲಿಕಾಪ್ಟರ್‌ನ ಕಾಕ್‌ಪಿಟ್‌ನ ದತ್ತಾಂಶಗಳನ್ನು ಪರಿಶೀಲಿಸಿರುವ ತಂಡ, ಅಪಘಾತಕ್ಕೂ ಮುನ್ನ ಪೈಲಟ್‌ ಗಳು ಗೊಂದಲಕ್ಕೆ ಒಳಗಾಗಿರುವುದು ವಾಯ್ಸ್‌ ರೆಕಾರ್ಡರಲ್ಲಿ ದಾಖಲಾಗಿರುವ ಧ್ವನಿಮುದ್ರಿಕೆಗಳನ್ನು ಪರೀಕ್ಷೆಗೆ ಒಳಪಡಿಸಿ, ಅಪಘಾತಕ್ಕೆ ಪ್ರಾಥಮಿಕ ಕಾರಣಗಳನ್ನು ಕಂಡು ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News