ಕಾರ್ಕಳ: ಎರಡನೇ ಪತ್ನಿಯಿಂದ ಕಿರುಕುಳ ಆರೋಪ; ಪತಿ ಆತ್ಮಹತ್ಯೆ

Update: 2022-06-19 04:49 GMT

ಕಾರ್ಕಳ, ಜ.14: ಹಣ ವಿಚಾರದಲ್ಲಿನ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಾಲಾದ ಘಟನೆ ಜ.13ರಂದು ರಾತ್ರಿ ಬೆಳ್ಮಣ್ ಗ್ರಾಮದ ಪವಿತ್ರನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಪವಿತ್ರ ನಗರದ ನಿವಾಸಿ ಲಾರೆನ್ಸ್ ರೋಶನ್ ಲೋಬೋ(35) ಎಂದು ಗುರುತಿಸಲಾಗಿದೆ. ಇವರು ಮತ್ತು ಇವರ ಎರಡನೆ ಪತ್ನಿ ರಾಣಿ ಸುನಿಲ್ ದಾಸ್ ನಡುವೆ ಹಣದ ವಿಚಾರದಲ್ಲಿ ವೈಮನಸ್ಸು ಇದ್ದು, ರಾಣಿ, ರೋಶನ್ ಲೋಬೋಗೆ ಹಣದ ವಿಚಾರದಲ್ಲಿ ಕಿರುಕುಳ ಕೊಡುತ್ತಿದ್ದರೆಂದು ದೂರಲಾಗಿದೆ.

ಇದೇ ಕಾರಣದಿಂದ ಮನನೊಂದ ರೋಶನ್ ಲೋಬೋ ಮನೆಯ ಮುಂಭಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News