ಅಮರಮುಡ್ನೂರು: ಬಾವಿಗೆ ಬಿದ್ದು ಯುವಕ ಮೃತ್ಯು

Update: 2022-01-15 12:39 GMT
ಸಾಂದರ್ಭಿಕ ಚಿತ್ರ

ಸುಳ್ಯ: ಅಮರಮುಡ್ನೂರು ಗ್ರಾಮದ ಕೋನಕಜೆ ಎಂಬಲ್ಲಿ  ವ್ಯಕ್ತಿಯೊಬ್ಬರು ಮರದಿಂದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆನ್ನಲಾದ ಘಟನೆ ವರದಿಯಾಗಿದೆ.

ಕೋನಕಜೆ ನಿವಾಸಿ ಆನಂದ (35 ) ಎಂಬವರ ಮೃತದೇಹ ಅವರ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಬಾವಿಯ ಪಕ್ಕದ ತೆಂಗಿನ ಮರಕ್ಕೆ ಹತ್ತಿದ್ದ ಅವರು ಅಲ್ಲಿಂದ ಕಾಲು ಜಾರಿ ಪಕ್ಕದಲ್ಲಿರುವ ಬಾವಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಮೃತ ಆನಂದ ಅವರ ಪತ್ನಿ ಮತ್ತು ಇತರರು ಯಾರೂ ಮನೆಯಲ್ಲಿ ಇಲ್ಲದಿರುವುದರಿಂದ ಘಟನೆ ತಿಳಿಯುವಾಗ ವಿಳಂಬವಾಗಿತ್ತು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News