ಬಿಕರ್ನಕಟ್ಟೆ: ಅಹ್ಸನುಲ್ ಮಸಾಜೀದ್‌ಗೆ ಆಯ್ಕೆ

Update: 2022-01-15 18:15 GMT
ಸೈಯದ್ ಮುಹಮ್ಮದ್ ಸಯೀದ್

ಮಂಗಳೂರು, ಜ.15: ನಗರದ ಬಿಕರ್ನಕಟ್ಟೆಯ ಅಹ್ಸನುಲ್ ಮಸಾಜೀದ್ ಮಸೀದಿಯ ಆಡಳಿತ ಮಂಡಳಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆಯು ಜ.9ರಂದು ಅವಿರೋಧವಾಗಿ ನಡೆದಿದ್ದು, ಜ.10ರಂದು ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯೂ ಅವಿರೋಧವಾಗಿ ನಡೆದಿದೆ ಎಂದು ಚುನಾವಣಾಧಿಕಾರಿ ಉಮರಬ್ಬ ಮಾಸ್ಟರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಸೀದಿಯ ಅಧ್ಯಕ್ಷರಾಗಿ ಸೈಯದ್ ಮುಹಮ್ಮದ್ ಸಯೀದ್, ಉಪಾಧ್ಯಕ್ಷರಾಗಿ ಅಕ್ಬರ್ ಅಲಿ, ಕಾರ್ಯದರ್ಶಿಯಾಗಿ ಕುದ್ರೋಳಿ ರಶೀದ್ ಸಾಹೇಬ್, ಕೋಶಾಧಿಕಾರಿಯಾಗಿ ಕಿಲ್ಪಾಡಿ ಮುಹಮ್ಮದ್ ಇಕ್ಬಾಲ್ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಅಬ್ದುಲ್ಲಾಹ್ ರಹ್ಮಾನ್ ಇಸ್ಮಾಯೀಲ್, ಅನ್ವರ್ ಅಹ್ಮದ್ ಶೇಖ್, ಪಿ.ಎಸ್.ಹುಸೈನಬ್ಬ, ಡಾ. ಮೆಹಬೂಬ್ ಖಾನ್, ಮುಹಮ್ಮದ್ ಆಝಮ್ ಇಸ್ಮಾಯೀಲ್ ಶೇಖ್, ಮುಹಮ್ಮದ್ ರಿಯಾಝ್, ಶೇಖ್ ಮುಹಮ್ಮದ್ ಶರೀಫ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News