ಯುವವಾಹಿನಿಯಿಂದ ವೆನ್ಲಾಕ್ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ

Update: 2022-01-16 13:17 GMT

ಮಂಗಳೂರು, ಜ.16 : ಯುವವಾಹಿನಿ ಕೇಂದ್ರ ಸಮಿತಿಯು ಆರೋಗ್ಯ ಮಂತ್ರ ಸೇವಾ ಯೋಜನೆಯಡಿ 6.50 ಲಕ್ಷ ರೂ. ವೆಚ್ಚದಲ್ಲಿ ನೂತನ ಡಯಾಲಿಸಿಸ್ ಯಂತ್ರವನ್ನು ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿತು.

ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ವೈ, ಮಾಜಿ ಶಾಸಕ ಕೆ. ವಸಂತ ಬಂಗೇರ ಜಂಟಿಯಾಗಿ ನೂತನ ಯಂತ್ರವನ್ನು ಅಲಂಕಾರ ಪಟ್ಟಿ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ. ಶಾನ್‌ಭೋಗ್, ಆರ್‌ಎಂಒ ಡಾ. ಸುಧಾಕರ್, ಮೂತ್ರ ರೋಗ ತಜ್ಞ ಡಾ. ಸದಾನಂದ ಪೂಜಾರಿ, ಉದ್ಯಮಿಗಳಾದ ಶ್ರೀನಿವಾಸ ಕೂಳೂರು, ಹೃತ್ವಿಕ್, ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಕ್ರೀಡೆ ಮತ್ತು ಅರೋಗ್ಯ ವಿಭಾಗದ ನಿರ್ದೇಶಕ ಭಾಸ್ಕರ ಕೋಟ್ಯಾನ್ ಕೂಳೂರು , ಪತ್ರಕರ್ತ ದೇವರಾಜ್ ಅಮೀನ್, ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News