​ಬಾವಿಗೆ ಬಿದ್ದು ಮೃತ್ಯು

Update: 2022-01-26 14:44 GMT

ಕುಂದಾಪುರ: ಯಕ್ಷಗಾನ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸು ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜ.25ರಂದು ನಸುಕಿನ ವೇಳೆ ಸಳ್ವಾಡಿ ಕರಿಕಲ್ಲುಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಾಳಾವರ ಗ್ರಾಮದ ಸಳ್ವಾಡಿ ಗುಡ್ಡಿಬೆಟ್ಟು ನಿವಾಸಿ ರಘುರಾಮ ಶೆಟ್ಟಿ (53) ಎಂದು ಗುರುತಿಸಲಾಗಿದೆ.

ಇವರು ಜ.24ರಂದು ರಾತ್ರಿ ಸಳ್ವಾಡಿ ಯಲ್ಲಿ ನಡೆದ ಯಕ್ಷಗಾನಕ್ಕೆಂದು ಮನೆಯಿಂದ ಹೋಗಿದ್ದು, ಜ.25ರಂದು ನಸುಕಿನ ವೇಳೆ ಇವರು ಯಕ್ಷಗಾನ ನೋಡಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಸಳ್ವಾಡಿ ಕರಿಕಲ್ಲುಕಟ್ಟೆ ಎಂಬಲ್ಲಿರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News