ಜಾರ್ಖಂಡ್ ದೋಣಿ ದುರಂತ:13ಕ್ಕೇರಿದ ಸಾವುಗಳ ಸಂಖ್ಯೆ

Update: 2022-02-28 18:17 GMT

ರಾಂಚಿ,ಫೆ.28: ಜಾರ್ಖಂಡ್ ನ ಜಮ್ತಾರಾ ಜಿಲ್ಲೆಯಲ್ಲಿ ಮೈಥನ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಗುರುವಾರ ಸಂಜೆ ದೋಣಿಯೊಂದು ಮುಳುಗಿ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ ಸೋಮವಾರ ಬೆಳಿಗ್ಗೆ 13ಕ್ಕೇರಿದೆ.

ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ 17 ಜನರು ಧನಬಾದ್ ಜಿಲ್ಲೆಯ ನಿರ್ಸಾದಿಂದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು, ಬೇರಿಗಾಂವ್ ಪ್ರದೇಶದಲ್ಲಿ ದೋಣಿ ಬುಡಮೇಲಾಗಿದ್ದು,ಸ್ಥಳೀಯರ ನೆರವಿನೊಂದಿಗೆ ನಾಲ್ವರನ್ನು ರಕ್ಷಿಸಲಾಗಿತ್ತು.

ಎಲ್ಲ 13 ಜನರ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಅವುಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಎನ್ಡಿಆರ್ಎಫ್ ಸೇರಿದಂತೆ ಸ್ಥಳಕ್ಕೆ ತಲುಪಿದ್ದ ರಕ್ಷಣಾ ತಂಡಗಳು ಶವಗಳನ್ನು ನೀರಿನಿಂದ ಹೊರಕ್ಕೆ ತೆಗೆದಿವೆ ಎಂದು ಜಮ್ತಾರಾ ಜಿಲ್ಲಾಧಿಕಾರಿ ಫೈಝ್ ಅಕ್ ಅಹ್ಮದ್ ಮುಮ್ತಾಝ್ ಸುದ್ದಿಗಾರರಿಗೆ ತಿಳಿಸಿದರು.

ಪ್ರದೇಶದಲ್ಲಿರುವ ಸೇತುವೆಯು ಶಿಥಿಲಗೊಂಡಿರುವುದರಿಂದ ಹೆಚ್ಚಿನ ಜನರು ದೋಣಿಗಳ ಮೂಲಕ ನದಿಯನ್ನು ದಾಟುತ್ತಾರೆ ಎಂದು ಆಡಳಿತದ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News