ದ.ಕ.ಜಿಲ್ಲಾ ಕಸಾಪ ಕಾರ್ಯಾಲಯ ಉದ್ಘಾಟನೆ
Update: 2022-03-01 20:16 IST
ಮಂಗಳೂರು, ಮಾ.1: ನಗರದ ನಂತೂರು ಪದವು ಶ್ರೀ ಭಾರತೀ ಸಮೂಹ ಸಂಸ್ಥೆ ಸಮುಚ್ಚಯದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನೂತನ ಕಾರ್ಯಾಲಯವನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ ಸೋಮವಾರ ಉದ್ಘಾಟಿಸಿದರು.
ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಂ. ತಿರುಮಲೇಶ್ವರ ಭಟ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗಳಾದ ವಿನಯ ಆಚಾರ್ಯ ಎಚ್., ರಾಜೇಶ್ವರಿ. ಎಂ, ಗೌರವ ಕೋಶಾಧ್ಯಕ್ಷ ಐತ್ತಪ್ಪನಾಯ್ಕ್, ಸಂಘ ಸಂಸ್ಥೆಗಳ ಪ್ರತಿನಿಧಿ ಮೋಹನದಾಸ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.