ಸಂತ ಫಿಲೋಮಿನಾ ಕಾಲೇಜಿನಲ್ಲಿ 'ಫಿಲೋ ಬೊಳ್ಳಿ’ ತುಳು ಸಂಘಕ್ಕೆ ಚಾಲನೆ
ಪುತ್ತೂರು, ಮಾ.8: ತುಳು ಕೇವಲ ಒಂದು ಭಾಷೆ ಮಾತ್ರವಲ್ಲ.ಅದೊಂದು ಸಮೃದ್ಧವಾದ ಸಂಸ್ಕೃತಿ. ತೌಳವ ಆಚಾರ ವಿಚಾರಗಳಲ್ಲಿ ನಮ್ಮ ಪ್ರಾಚೀನರ ಪ್ರಕೃತಿ ಪೂಜೆಯ ಹಲವಾರು ಹೊಳವುಗಳಿವೆ. ಹಲವು ಭಾಷೆಗಳನ್ನಾಡುವ ಆಧುನಿಕ ಸಮಾಜದಲ್ಲಿ ತುಳುವರು ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಲು ತುಳುವರು ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಹಾಗೂ ಜಾನಪದ-ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಪ್ರೊ..ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಜಿ ಸೆಮಿನಾರ್ ಹಾಲ್ನಲ್ಲಿ 'ಫಿಲೋ ಬೊಳ್ಳಿ’ ತುಳು ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ’ಪೂವರಿ’ ತುಳು ಪತ್ರಿಕೆ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಮತ್ತು ಕವಿ ಲಕ್ಷ್ಮಿನಾರಾಯಣ ರೈ ಹರೇಕಳ, ರಂಗಭೂಮಿ ಮತ್ತು ಸಿನಿಮಾ ನಟ ಸುಂದರ ರೈ ಮಂದಾರ ಉಪಸ್ಥಿತರಿದ್ದರು.
ಸಂಘದ ವಿದ್ಯಾರ್ಥಿಗಳು ’ತುಳು ಸುಗಿಪು’ ನಡೆಸಿಕೊಟ್ಟರು. ತುಳು ಸಂಘದ ಸಂಯೋಜಕಿ ದೀಪಿಕಾ ಸನಿಲ್ ಸ್ವಾಗತಿಸಿದರು. ಬಿಬಿಎ ವಿಭಾಗದ ಮುಖ್ಯಸ್ಥ ಪ್ರೊ.ರಾಧಾಕೃಷ್ಣ ಗೌಡ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜು ಯಕ್ಷಗಾನ ಸಂಘದ ಸಂಯೋಜಕ ಪ್ರಶಾಂತ ರೈ ಪುತ್ತೂರು ವಂದಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ದಿನಕರ ಅಂಚನ್ ಕಾರ್ಯಕ್ರಮ ನಿರೂಪಿಸಿದರು.