ಗುರುಪುರ ಸಮೀಪ ಅಪಘಾತ: ಬೈಕ್ ಸವಾರನಿಗೆ ಗಾಯ

Update: 2022-03-13 13:40 GMT

ಗುರುಪುರ : ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಲಿ ಟ್ಯಾಂಕರ್ ಹಾಗೂ ಬೈಕ್ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಉಪ್ಪುಗೂಡು ಶ್ರೀ ಕ್ಷೇತ್ರ ವಜ್ರದೇಹಿ ಮಠದ ಬಳಿ ರವಿವಾರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗುರುಪುರದ ಮನೀಶ್ ಯಾನೆ ಮುನ್ನ (30)ಗಂಭೀರ ಗಾಯಗೊಂಡಿದ್ದಾರೆ.

ರವಿವಾರ ಅಪರಾಹ್ನ ವೇಳೆಗೆ ಟ್ಯಾಂಕರ್-ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಈ ಸಂದರ್ಭ ಟ್ಯಾಂಕರ್‌ನ ಮುಂದಿನ ಟಯರ್ ಮಧ್ಯೆ ಮನೀಶ್ ಬೈಕ್ ಸಹಿತ ಸಿಲುಕಿದ್ದರು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.

ಸುಮಾರು ಒಂದೂವರೆ ತಾಸು ಕ್ರೇನ್ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಗಾಯವಾಗಿರುವ ಮನೀಶ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News