×
Ad

ಮಾ.25ರಿಂದ ಕಾರ್ನಾಡ್ ರಿಫಾಯಿಯಾ ದಫ್ ರಾತೀಬ್

Update: 2022-03-20 00:04 IST

ಮುಲ್ಕಿ : ಹಿಮಾಯತುಲ್ ಇಸ್ಲಾಂ ಸಮಿತಿ (ರಿ) ಇದರ 45ನೇ ವಾರ್ಷಿಕೋತ್ಸವ ಮತ್ತು ದಫ್ ರಾತೀಬ್ ಕಾರ್ಯಕ್ರಮವು ಮಾ. 25 ರಿಂದ 27ರ ವರೆಗೆ ಕಾರ್ನಾಡು ಝಿಂದಾ ಮದರ್ ಶಾ ವಲಿಯುಲ್ಲಾ ದರ್ಗಾ ಶರೀಫ್ ನ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಪ್ರಯುಕ್ತ ರಿಫಾಯಿ ದಫ್ ರಾತೀಬ್, ಧಾರ್ಮಿಕ ಮತ ಪ್ರಭಾಷಣ ಮತ್ತು ಸಮಾರೋಪ ಸಮಾರಂಭ ನಡೆಯಲಿವೆ.

ಮತ ಪ್ರಭಾಷಣ ಕಾರ್ಯಕ್ರಮದ ಉದ್ಘಾಟನೆ ಮಾ.25ರಂದು  ಮರ್ಹೂಂ ಶೈಖುನಾ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ ವೇದಿಕೆಯಲ್ಲಿ ಮಸ್ಜಿದುನ್ನೂರ್ ಕಾರ್ನಾಡ್ ನ ಖತೀಬ್‌ ಅಲ್ಹಾಜ್‌  ಇಸ್ಮಾಯಿಲ್ ದಾರಿಮಿ ನೆರವೇರಿಸುವರು. ಅಧ್ಯಕ್ಷತೆಯನ್ನು ಮುಲ್ಕಿ ಕೇಂದ್ರ ಶಾಫಿ ಜುಮಾ‌‌ ಮಸೀದಿಯ ಅಧ್ಯಕ್ಷ ಲಿಯಾಕತ್ ಅಲಿ ವಹಿಸುವರು. ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಹಾಜಿ. ಎಸ್ .ಬಿ . ಮುಹಮ್ಮದ್ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿರುವರು. ಹಿಮಾಯತ್ ಇಸ್ಲಾಮ್ ಸಮಿತಿಯ ಅಧ್ಯಕ್ಷ  ಹಾಜಿ ಕೆ.ಏ.ಇಬ್ರಾಹಿಂ ಉಪಸ್ಥಿತರಿರುವರು.

ಮಾ. 26 ರoದು ಬದ್ರಿಯಾ ಜುಮಾ ಮಸೀದಿ ಕೋಡಿ ಉಳ್ಳಾಲದ ಖತೀಬ್‌‌ ಹಾಜಿ ಆದಂ ಫೈಝಿ  ಮುಖ್ಯ ಪ್ರಭಾಷಣ ಮಾಡುವರು. ಶಾಫಿ ಜುಮಾ ಮಸೀದಿಯ ಕಾರ್ಯದರ್ಶಿ ಹಾಜಿ ಫಾರೂಕ್ ಕಾರ್ನಾಡ್ ಉಪಸ್ಥಿತರಿರುವರು.

ಮಾ. 27 ರಂದು ಸಾಯಂಕಾಲ ಅಲ್ಹಾಜ್  ಮುಹಮ್ಮದ್ ಅವರ ನೇತೃತ್ವದಲ್ಲಿ ರಾತೀಬ್ ಹಾಗೂ ಮಗ್ರಿಬ್ ನಮಾಝಿನ ಬಳಿಕ ಮುಹಮ್ಮದ್ ಬಶೀರ್ ದಪ್ಪು ಉಸ್ತಾದ್ ಕಾಪು ಇವರ ನೇತೃತ್ವದಲ್ಲಿ ಸಂದಲ್ ಮೆರವಣಿಗೆ ನಡೆಯಲಿರುವುದು. ಅದೇ ದಿನ ರಾತ್ರಿ 9ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಘಾಟನೆಯನ್ನು ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್‌ ಹಾಜಿ ಎಸ್ .ಬಿ . ಮುಹಮ್ಮದ್ ದಾರಿಮಿ ನೆರವೇರಿಸುವರು.

ಅಧ್ಯಕ್ಷತೆಯನ್ನು  ಮಂಗಳೂರು‌ ಸಂಯುಕ್ತ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್  ವಹಿಸಲಿರುವರು.
ವೇದಿಕೆಯಲ್ಲಿ ಇಸ್ಮಾಯಿಲ್ ದಾರಿಮಿ, ಬಿ. ಎಂ. ಲಿಯಾಕತ್ ಅಲಿ, ಇನಾಯತ್ ಆಲಿ ಮುಲ್ಕಿ, ಅಫ್ಝಲ್ ಅಹ್ಮದ್, ಮಾಜೀ ಸಚಿವ ಕೆ. ಅಭಯಚಂದ್ರ ಜೈನ್, ಎಸ್ ಡಿ ಪಿ ಐ ಮಂಗಳೂರು ಅಧ್ಯಕ್ಷ‌ ಅಬೂಬಕ್ಕರ್ ಕುಳಾಯಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಇಕ್ಬಾಲ್ ಅಹ್ಮದ್ ಪ್ರಧಾನ ಕಾರ್ಯದರ್ಶಿ ಜೆಡಿಎಸ್ ಕರ್ನಾಟಕ ಸೇರಿದಂತೆ ಸಮಾಜ ಸೇವಕರು, ರಾಜಕೀಯ ನೇತಾರರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿರುವರು. ಬಳಿಕ ರಾತ್ರಿ 11 ಗಂಟೆಗೆ ಅನ್ನದಾನ ಕಾರ್ಯಕ್ರಮ ನಡೆಯಲಿರುವುದು ಎಂದು ಸಮಿತಿ ಅಧ್ಯಕ್ಷ ಹಾಜಿ ಕೆ .ಎ . ಇಬ್ರಾಹಿಂ ಮತ್ತು ಕಾರ್ಯದರ್ಶಿ ಎಂ .ಕೆ . ಹಸೈನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News