ಶ್ರೀಲಂಕಾದಿಂದ ಮತ್ತೆ 18ಕ್ಕೂ ಅಧಿಕ ನಾಗರಿಕರು ಭಾರತಕ್ಕೆ ಆಗಮನ

Update: 2022-04-22 16:17 GMT

ರಾಮೇಶ್ವರಂ (ತಮಿಳುನಾಡು), ಎ. 22: ಆರ್ಥಿಕ ಬಿಕ್ಕಟ್ಟು ಪೀಡಿತ ಶ್ರೀಲಂಕಾದಿಂದ 18ಕ್ಕೂ ಅಧಿಕ ಪ್ರಜೆಗಳು ಶುಕ್ರವಾರ ಭಾರತಕ್ಕೆ ಆಗಮಿಸಿದ್ದು, ಅವರಿಗೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿರುವ ಮಂಡಪಂ ವಲಸಿಗರ ಶಿಬಿರದಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ.

ಶ್ರೀಲಂಕಾದಿಂದ ಕಳೆದ ವಾರ ಆಗಮಿಸಿರುವ 12 ಮಂದಿಯೊಂದಿಗೆ ಈಗ ಈ 18 ಮಂದಿ ಕೂಡ ಸೇರಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ದೇಶದ ಆರ್ಥಿಕತೆ ಕುಸಿತಕ್ಕೊಳಗಾಗಿರುವುದರಿಂದ ತೀವ್ರ ಬಿಕ್ಕಟ್ಟಿಗೆ ತುತ್ತಾಗಿದ್ದೇವೆ. ಹಾಲಿನ ಪುಡಿ ಖರೀದಿಸಲು ಕೂಡ ನಮಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅಲ್ಲದೆ, ತನ್ನ ಪ್ರಜೆಗಳನ್ನು ನಿರ್ಲಕ್ಷಿಸುತ್ತಿರುವ ಅಧ್ಯಕ್ಷ ಗೋಟಬಯ ರಾಜಪಕ್ಷೆ ನೇತೃತ್ವದ ಸರಕಾರವನ್ನು ಟೀಕಿಸಿದ್ದಾರೆ. ಎರಡು ತಂಡಗಳಾಗಿ ಭಾರತಕ್ಕೆ ಆಗಮಿಸಿರುವ ಈ ಶ್ರೀಲಂಕಾ ಪ್ರಜೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡಾ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News