×
Ad

ರಾಜ್ಯದ ಕರಾವಳಿ ಪ್ರದೇಶ ಬಹುಸಂಸ್ಕೃತಿ, ಬಹು ಭಾಷೆ, ಧರ್ಮಗಳ ತೊಟ್ಟಿಲು: ದಿನೇಶ್ ಅಮೀನ್ ಮಟ್ಟು

Update: 2022-04-28 18:23 IST

ಕಾಪು : ರಾಜ್ಯದ ಕರಾವಳಿ ಪ್ರದೇಶವು ಬಹುಸಂಸ್ಕೃತಿ, ಬಹು ಭಾಷೆ, ಬಹು ಧರ್ಮಗಳ ಒಂದು ತೊಟ್ಟಿಲು. ಹಿರಿಯರು ಎಲ್ಲಾ ಧರ್ಮ, ಜಾತಿಯವರು ಕೂಡಿ ಕಟ್ಟಿದ್ದಾರೆ. ಇದನ್ನು ಮತ್ತೆ 30 ವರ್ಷಗಳ ಹಿಂದಿನ ಸೌಹಾರ್ದಯುತ ಕರಾವಳಿಯಾಗಬೇಕು ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಅವರು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಯವರ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ, ಬ್ಲಾಕ್ ಅಲ್ಪಸಂಖ್ಯಾತರ ಘಟಕ  ಮತ್ತು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಬಧವಾರ ಕಾಪು ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್‍ನಲ್ಲಿ ಆಯೋಜಿಸಿ ಸೌಹಾರ್ದ- ಇಫ್ತಾರ್ ಕೂಟವನ್ನು ಉದ್ದೇಶಿಸಿ ಮಾತನಾಡಿದರು.

ಎಲ್ಲಾ ದೇವರು, ಎಲ್ಲಾ ಧರ್ಮಗಳು ಪರಸ್ಪರ ಸೌಹಾರ್ದಯುತ ಬದುಕಿ ಎಂದು ಸಂದೇಶ ನೀಡುತ್ತದೆ. ಒಂದು ಧರ್ಮ ಇನ್ನೊಂದು ಧರ್ಮದ ಮೂಲಸ್ವರೂಪದಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಅದರೆ ಆ ಧರ್ಮಗಳ ಅಪವ್ಯಾಖ್ಯಾನಗಳು ನಡೆಯುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ವಿಷಾಧಿಸಿದ ಅವರು, ಪಕ್ಷಗಳು ಅಭಿವೃದ್ಧಿಯ ಆಧಾರದಲ್ಲಿ ಸಾಧನೆಯ ಮೇಲೆ ಓಟು ಕೇಳ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಹೆಸರಿನಲ್ಲಿ ಓಟು ಕೇಳುತಿದ್ದು, ಇಂತಹವರು ನಿಜವಾದ ಧರ್ಮದ್ರೋಹಿಗಳು ಎಂದು ನುಡಿದರು.

ಪೊಲಿಪು ಜುಮಾ ಮಸೀದಿಯ ಖತೀಬ್ ಇರ್ಷಾದ್ ಸಆದಿ, ಶಿರ್ವ ಆರೋಗ್ಯಮಾತ ಕ್ರೈಸ್ತ ದೇವಾಲಯದ ಸಹಾಯಕ ಧರ್ಮಗುರು ರ.ಫಾ. ರೋಲ್ವಿನ್ ಅರನ್ಹಾ, ಅಧ್ಯಕ್ಷತೆಯನ್ನು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ವಹಿಸಿದ್ದರು. ಕಾಂಗ್ರೆಸ್  ಮುಖಂಡರುಗಳಾದ ನವೀನ್‍ಚಂದ್ರ ಜೆ.ಶೆಟ್ಟಿ, ರಾಜಶೇಖರ ಕೋಟ್ಯಾನ್, ಶಿವಾಜಿ ಸುವರ್ಣ ಬೆಳ್ಳೆ, ಸಂತೋಷ್ ಕುಲಾಲ್, ಹರೀಶ್ ಕಿಣಿ, ಶಾಂತಲತಾ ಎಸ್. ಶೆಟ್ಟಿ, ವಿಲ್ಸನ್ ರೋಡ್ರಿಗಸ್, ಐಡಾ ಗಿಬ್ಬಾ ಡಿಸೋಜ, ಮುಸ್ಲಿಮ್ ಒಕ್ಕೂಟ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಶಬೀ ಅಹಮದ್ ಖಾಝಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಮುಹಮ್ಮದ್ ಸಾದಿಕ್, ದೀಪಕ್ ಎರ್ಮಾಳ್,  ಎಚ್. ಅಬ್ದುಲ್ಲಾ, ನವೀನ್ ಎನ್.ಶೆಟ್ಟಿ, ಸುಧಾಕರ .ಕೆ,   ಕೆ.ಎಚ್.ಉಸ್ಮಾನ್, ವೈ.ಸುಧೀರ್, ಫಾರೂಕ್ ಚಂದ್ರನಗರ, ರಿಯಾಜ್ ಪಳ್ಳಿ, ಶಾಬು ಸಾಹೇಬ್, ದಿವಾಕರ್ ಬಿ. ಶೆಟ್ಟಿ, ಆಸಿಫ್ ಮೂಳೂರು, ಹಮೀದ್ ಯೂಸುಫ್,  ಜೇಬಾ ಸೆಲ್ವನ್,  ಜ್ಯೋತಿ ಮೆನನ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಂಜನಿ ಹೆಗ್ಡೆ, ದೀಪ್ತಿ ಮನೋಜ್, ಆಶಾ ಕಟಪಾಡಿ, ಶಾಂತಿ ಪಿರೇರಾ, ಸುಚರಿತ ಪೂಜಾರಿ, ತಸ್ನೀನ್ ಅರಃ, ಕರುಣಾಕರ್ ಪೂಜಾರಿ, ಮೆಲ್ವಿನ್ ಡಿಸೋಜ, ಝಹೀರ್ ಬೆಳಪು, ಗೋಪಾಲ್ ಪೂಜಾರಿ ಫಲಿಮಾರು, ಮಧ್ವರಾಜ್ ಬಂಗೇರ, ರಾಜೇಶ್ ಕುಲಾಲ್, ಜಾನ್ಸನ್ ಕರ್ಕಡ, ನಸೀರ್ ಅಹ್ಮದ್,  ರಾಜೇಶ್ ಮೆಂಡನ್, ಸಯ್ಯದ್ ನಿಝಮ್,  ಅಶೋಕ್ ನಾಯರಿ ಮತ್ತಿತರ ಹಾಜರಿದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ನಿರೂಪಿಸಿದರು, ಅಲ್ಪಸಂಖ್ಯಾತರ ಘಟಕಾಧ್ಯಕ್ಷ ಶರ್ಫುದ್ದೀನ್ ಶೇಖ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News