ಹಿಮಾಚಲ ಪ್ರದೇಶ: ಖಾಲಿಸ್ತಾನ್ ಧ್ವಜ ಹಾರಿಸಿದ್ದ ಆರೋಪಿಯ ಸೆರೆ
Update: 2022-05-11 17:26 GMT
ಶಿಮ್ಲಾ, ಮೇ 11: ಹಿಮಾಚಲ ಪ್ರದೇಶದ ಚಳಿಗಾಲದ ರಾಜಧಾನಿ ಧರ್ಮಶಾಲಾದಲ್ಲಿಯ ವಿಧಾನಸಭೆಯ ಪ್ರವೇಶದ್ವಾರದಲ್ಲಿ ಖಾಲಿಸ್ತಾನಿ ಧ್ವಜವನ್ನು ಹಾರಿಸಿದ್ದಕ್ಕಾಗಿ ಮತ್ತು ಆವರಣ ಗೋಡೆಯಲ್ಲಿ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಪಂಜಾಬ್ ನಿವಾಸಿ ಹರವೀರ್ ಸಿಂಗ್ ಎಂಬಾತನನ್ನು ಬುಧವಾರ ಬೆಳಿಗ್ಗೆ ಹಿ.ಪ್ರ.ಪೊಲೀಸರು ಬಂಧಿಸಿದ್ದಾರೆ.
ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯಾಚರಣೆಯು ನಡೆಯುತ್ತಿದ್ದು,ಶೀಘ್ರ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಿಳಿಸಿದರು. ಸಿಂಗ್ ಖಾಲಿಸ್ತಾನಿ ಧ್ವಜವನ್ನು ಹಾರಿಸಿದ್ದನ್ನು ಮತ್ತು ಆವರಣ ಗೋಡೆಗೆ ಹಾನಿಯನ್ನುಂಟು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದರು.