ಬಂಟ್ವಾಳ: ತಾಜುಲ್ ಉಲಮಾ ರಿಲೀಫ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ) ದ.ಕ ವತಿಯಿಂದ ಪುಸ್ತಕ ವಿತರಣೆ

Update: 2022-05-14 07:19 GMT

ಬಂಟ್ವಾಳ : ಕುಲಾಲ್ ಬದ್ರಿಯಾ ಜುಮ್ಮಾ ಮಸೀದಿಯ ಮದರಸ ಹಾಲ್ ನಲ್ಲಿ ಜಿಲ್ಲೆಯ ಆಯ್ದ ಬಡ ಹಾಗೂ ಯತೀಮ್ ಕುಟುಂಬಗಳ, ಸುಮಾರು 225 ಮಕ್ಕಳಿಗೆ ಮದರಸದ ಪುಸ್ತಕ , ಬ್ಯಾಗ್ ಹಾಗೂ ಶಾಲಾ ಪುಸ್ತಕವನ್ನು ದಾನಿಗಳ ನೆರವಿನಿಂದ ವಿತರಿಸಲಾಯಿತು. 

ತಾಜುಲ್ ಉಲಮಾ ರಿಲೀಫ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಇದರ ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಮುಹಮ್ಮದ್ ಕುಪ್ಪೆಟ್ಟಿ ( ಟ್ರಸ್ಟಿ) ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು. 

ಕುಲಾಲ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮಸೂದ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ ಚಾರಿಟಿಯನ್ನು ದಾನಿಗಳಿಗೆ ಪರಿಚಯಿಸಿದರು. 

ಕಾರ್ಯಕ್ರಮದಲ್ಲಿ ಕುಲಾಲ್ ಜುಮ್ಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಕುಲಾಲ್ , ಕಾರ್ಯದರ್ಶಿ ಕರೀಂ ಕುಲಾಲ್ , ಶರೀಫ್ ಮದನಿ ಪಾಂಡವರಕಲ್ಲು , ಶಿಹಾಬ್ ಸಹದಿ ಜೋಗಿಬೆಟ್ಟು , ಇಲ್ಯಾಸ್ ಕುಲಾಲ್ , ಹಸೈನಾರ್ ಕಕ್ಕೆಪದವು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News