ಮಾಡಿನಿಂದ ಬಿದ್ದು ಮೃತ್ಯು

Update: 2022-05-16 16:24 GMT

ಗಂಗೊಳ್ಳಿ, ಮೇ ೧೬: ಮನೆಯ ಮಾಡಿನಲ್ಲಿ ಕೆಲಸ ಮಾಡುತ್ತಿದ್ದ ಬಿದ್ದು ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ಆರೂರು ಎಂಬಲ್ಲಿ ನಡೆದಿದೆ.

ಮೃತರನ್ನು ಬಾಬು ಆಚಾರ್ಯ(೫೫) ಎಂದು ಗುರುತಿಸಲಾಗಿದೆ. ಇವರು ಮೇ ೧೪ರಂದು ಬೆಳಗ್ಗೆ ಆಲೂರಿನ ಶೇಖರ ಶೆಟ್ಟಿ ಎಂಬವರ ಮನೆಯ ಕೆಲಸಕ್ಕೆ ಹೋಗಿದ್ದು, ಮನೆಯ ಮಾಡಿನ ಹೆಂಚು ಇಳಿಸುವಾಗ ಆಯತಪ್ಪಿ ಮಾಡಿನಿಂದ ಕೆಳಗೆ ನೆಲಕ್ಕೆ ಬಿದ್ದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮೇ ೧೫ರಂದು ರಾತ್ರಿ  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.  ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News