ಬೈಕಿಗೆ ಕಾರು ಢಿಕ್ಕಿ: ಓರ್ವ ಮೃತ್ಯು, 10 ಮಂದಿಗೆ ಗಾಯ

Update: 2022-05-22 16:14 GMT

ಕೋಟ : ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹ ಸವಾರ ಮೃತಪಟ್ಟು ಹತ್ತು ಮಂದಿ ಗಾಯಗೊಂಡ ಘಟನೆ ಸಾಸ್ತಾನ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇ 21ರಂದು ರಾತ್ರಿ ನಡೆದಿದೆ.

ಮೃತರನ್ನು ಸೊಲೊಮನ್ ಬಾಂಜ್ ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಜೆರಾಲ್ಡ್ ರೋಡ್ರಿಗಸ್ ಕುಳ್ಳಿರಿಸಿ ಕೋಡಿ ರಸ್ತೆಯಿಂದ ಸಾಸ್ತಾನ ಜಂಕ್ಷನ್‌ಗೆ ಬಂದು ಉಡುಪಿ-ಕುಂದಾಪುರ ಹೆದ್ದಾರಿಯಲ್ಲಿ ಕುಂದಾಪುರದ  ಕಡೆಗೆ ಹೋಗಲು ಬೈಕ್‌ನ್ನು ತಿರುಗಿಸುವಾಗ ಉಡುಪಿ ಕಡೆಯಿಂದ ಕುಂದಾಪು ಕಡೆ ಹೋಗುತ್ತಿದ್ದ ಟವೆರಾ, ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಬೈಕಿನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯ ಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಸೊಲೊಮನ್ ಬಾಂಜ್ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೇ ೨೨ರಂದು ಬೆಳಗಿನ ಜಾವ ಮೃತಪಟ್ಟರು.

ಢಿಕ್ಕಿ ಹೊಡೆದ ಟವೆರಾ, ಕುಂದಾಪುರ-ಉಡುಪಿ ರಸ್ತೆಗೆ ಹೋಗಿ ಅಲ್ಲಿಂದ ರಸ್ತೆಯ  ಪಕ್ಕದಲ್ಲಿರುವ  ಗೂಡಂಗಡಿಯ ಬಳಿ ಹೋಗಿ ನಿಂತಿದೆ. ಇದರಿಂದ ಟವೆರಾದಲ್ಲಿದ್ದ ೯ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News