ಬೊಳ್ಳೂರು | ರಿಲಯನ್ಸ್ ಅಸೋಸಿಯೇಶನ್ ಮಹಾಸಭೆ

Update: 2022-05-23 04:32 GMT

ಮುಲ್ಕಿ, ಮೇ 23: ರಿಲಯನ್ಸ್ ಅಸೋಸಿಯೇಷನ್ (ರಿ)  ಬೊಳ್ಳೂರು, ಹಳೆಯಂಗಡಿ ಇದರ 26ನೇ ವಾರ್ಷಿಕ ಮಹಾಸಭೆಯು ಮೊಯ್ದಿನ್ ಹಳೆಯಂಗಡಿ ಅಧ್ಯಕ್ಷತೆಯಲ್ಲಿ ರವಿವಾರ ರಿಲಯನ್ಸ್ ಭವನದಲ್ಲಿ ನಡೆಯಿತು.

ಈ ಸಂದರ್ಭ 2022-23ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಕ್ಬರ್ ಬೊಳ್ಳೂರು ಅವರು ಮರು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ರಿಯಾಝ್ ಕೊಪ್ಪಳ, ಕಾರ್ಯದರ್ಶಿಯಾಗಿ ಇಕ್ಬಾಲ್ ಎಂ.ಎ., ಜೂತೆ-ಕಾರ್ಯದರ್ಶಿಯಾಗಿ ಫಾರೂಕ್ ನವರಂಗ್, ಇಲ್ಯಾಸ್ ಬೊಳ್ಳೂರ್, ಲೆಕ್ಕ ಪರಿಶೋಧಕರಾಗಿ ಕೌಶಿಕ್ ಎಂ.ಸಿ.ಎಫ್., ಮಾಧ್ಯಮ ಉಸ್ತುವಾರಿಯಾಗಿ ಮುಬಾರಕ್ ಬೊಳ್ಳೂರ್, ಜಿಸಿಸಿ ಸಂಯೋಜಕರಾಗಿ ಹಾರಿಸ್ ನವರಂಗ್, ಫಾರೂಕ್ ಫ್ಯಾನ್ಸಿ ,ಮುಬಾರಕ್ ಬೊಳ್ಳೂರ್. ಸಲಹೆಗಾರರಾಗಿ ಆರಿಸ್‌ ನವರಂಗ್, ಶಮೀಮ್ ಬೊಳ್ಳೂರ್, ಸಿದ್ದೀಕ್ ಬೊಳ್ಳೂರ್.

ಸ್ವಯಂಸೇವಕ ಉಸ್ತುವಾರಿಯಾಗಿ ಮಮ್ತಾಝ್ ಅಲಿ ಬೊಳ್ಳೂರ್, ಮುಹಮ್ಮದ್ ಅಲಿ ಇಂದಿರಾ ನಗರ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News