ಬೊಳ್ಳೂರು: ಮೇ 24ರಂದು ನೂರೇ ಅಜ್ಮೀರ್ ಸಂಗಮ ಕಾರ್ಯಕ್ರಮ

Update: 2022-05-23 16:19 GMT

ಮುಲ್ಕಿ, ಮೇ 23:  ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಹಿಫ್ಳುಳ್ ಕುರ್‌ಆನ್‌ ಕಾಲೇಜು ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ 24ರಂದು ಮಗ್ರಿಬ್ ನಮಾಝ್ ನ ಬಳಿಕ ಬೊಳ್ಳೂರು ಮರ್ಹೂಮ್‌ ಅಬ್ದುಲ್ಲಾ ಉಸ್ತಾದ್ ವೇದಿಕೆಯಲ್ಲಿ ಬೃಹತ್ ಆಧ್ಯಾತ್ಮಿಕ ನೂರೇ ಅಜ್ಮೀರ್ ಸಂಗಮ ನಡೆಯಲಿದೆ.

ಈ ಸಂಬಂಧ ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ನಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಗೌರವಾಧ್ಯಕ್ಷ ಶೈಖುನಾ ಬೊಳ್ಳೂರು ಉಸ್ತಾದ್,  ಕಾರ್ಯಕ್ರಮವನ್ನು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಗೌರವಾಧ್ಯಕ್ಷರಾದ ಶೈಖುನಾ ಮುಹಮ್ಮದ್ ಹಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್ ಉದ್ಘಾಟಿಸಲಿರುವರು.

ಅಧ್ಯಕ್ಷತೆಯನ್ನು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ನ ಅಧ್ಯಕ್ಷ ಬಿ.ಇ. ಮುಹಮ್ಮದ್ ಎಂ.ಸಿ.ಎಫ್.‌ ವಹಿಸಲಿರುವರು. ಮಿತ್ತಬೈಲ್‌ ಉಸ್ತಾದ್ ಅವರ ಪುತ್ರ‌ ಇರ್ಶಾದ್‌ ಹುಸೈನ್ ದಾರಿಮಿ ಅಲ್ ಜಝರಿ ಅವರು ದುಆ ನೆರವೇರಿಸುವರು. ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತನಾಡುವರು. 

ಬೃಹತ್ ನೂರೇ ಅಜ್ಮೀರ್‌ ಸಂಗಮದ‌ ನೇತೃತ್ವವನ್ನು ವಲಿಯುದ್ದೀನ್‌ ಫೈಝಿ ವಾಝಕ್ಕಾಡ್ ಕೇರಳ ವಹಿಸುವರು. 

ಸಮಾರಂಭದಲ್ಲಿ ಎಸ್.ವೈ. ಎಸ್. ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್‌ ಅಝೀಝ್ ದಾರಿಮಿ ಚೊಕ್ಕಬೆಟ್ಟು,  ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಹಾಜಿ ಅಬ್ದುಲ್ ರಹ್ಮಾನ್ ಕಣ್ಣಂಗಾರ್, ಹಾಜಿ ಉಸ್ಮಾನ್‌ ಏರ್ ಇಂಡಿಯಾ, ನೌಷಾದ್ ಹಾಜಿ ಸೂರಲ್ಪಾಡಿ, ಶರೀಫ್ ಕುವೈಟ್, ಮುಹಮ್ಮದ್ ನೂರಾನಿಯ ಮೊದಲಾದವರು ಉಪಸ್ಥಿತರಿರುವರು ಎಂದು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಹಿಫ್ಳುಳ್ ಕುರ್‌ಆನ್‌ ಕಾಲೇಜು ಬೊಳ್ಳೂರು ಹಳೆಯಂಗಡಿ ಇದರ ಗೌರವಾಧ್ಯಕ್ಷರಾದ ಶೈಖುನಾ ಬೊಳ್ಳೂರು ಉಸ್ತಾದ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News