ಬೈಕ್ ಅಪಘಾತ: ಸವಾರ ಮೃತ್ಯು

Update: 2022-06-04 15:30 GMT

ಹಿರಿಯಡ್ಕ: ಬೈಸ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಓರ್ವ ಸವಾರ ಮೃತಪಟ್ಟ ಘಟನೆ ಜೂ.3ರಂದು ಮಧ್ಯಾಹ್ನ ಕುಕ್ಕೆಹಳ್ಳಿ ಕುಕ್ಕಿಕಟ್ಟೆಯ ಪ್ರಭು ಹಾರ್ಡ್‌ವೇರ್ ಸಮೀಪ ನಡೆದಿದೆ.

ಮೃತರನ್ನು ಬೈಕ್ ಸವಾರ ಕೊಳಲಗಿರಿಯ ಲಿಗೋರಿ ಡಿಸೋಜ ಎಂದು ಗುರು ತಿಸಲಾಗಿದೆ. ಸಹಸವಾರ ಜಾಯಿಲ್ ಡಿಸೋಜ ಎಂಬವರು ಗಾಯಗೊಂಡಿ ದ್ದಾರೆ. ಇವರು ಕುಕ್ಕೆಹಳ್ಳಿಯ ಕಡೆಯಿಂದ ಕೊಳಲಗಿರಿ ಕಡೆಗೆ ಬೈಕಿನಲ್ಲಿ ಬರುತ್ತಿ ದ್ದಾಗ ದಾರಿ ಮಧ್ಯೆ ಬೈಕ್ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ.

ಇದರಿಂದ ಇವರಿಬ್ಬರು ಗಾಯಗೊಂಡಿದ್ದು, ಇದರಲ್ಲಿ ಗಂಭೀರವಾಗಿ ಗಾಯ ಗೊಂಡ ಲಿಗೋರಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News