ಪ್ರವಾದಿ ನಿಂದನೆ ಪ್ರಕರಣ: ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ ಇಂಡೋನೇಶ್ಯ
Update: 2022-06-06 16:25 GMT
ಜಕಾರ್ತ: ಇಬ್ಬರು ಬಿಜೆಪಿ ಮುಖಂಡರು ಪ್ರವಾದಿ ಕುರಿತಾಗಿ ನಿಂದನೆಯ ಮಾತುಗಳನ್ನಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಕತರ್, ಕುವೈಟ್ ಹಾಗೂ ಇರಾನ್ ರಾಷ್ಟ್ರಗಳು ಭಾರತದ ರಾಯಭಾರಿಗೆ ಸಮನ್ಸ್ ನೀಡಿತ್ತು. ಇದೀಗ ಆ ಸಾಲಿಗೆ ಸೇರ್ಪಡೆ ಎಂಬಂತೆ ಇಂಡೋನೇಶ್ಯಾ ಕೂಡಾ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತ ನಿಲುವನ್ನು ಪ್ರಕಟಿಸಿದ ಇಂಡೋನೇಶ್ಯ, " ಭಾರತದ ಇಬ್ಬರು ರಾಜಕಾರಣಿಗಳು ಪ್ರವಾದಿ ಮುಹಮ್ಮದ್ ರ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದನ್ನು ಇಂಡೋನೇಶ್ಯ ಬಲವಾಗಿ ಖಂಡಿಸುತ್ತದೆ. ಈ ಸಂದೇಶವನ್ನು ಜಕಾರ್ತದಲ್ಲಿರುವ ಭಾರತೀಯ ರಾಯಭಾರಿಗೂ ಕಳುಹಿಸಲಾಗಿದೆ" ಎಂದು ಹೇಳಿದೆ.
Indonesia strongly condemns unacceptable derogatory remarks against Prophet Muhammad PBUH by two Indian politicians. This message has been conveyed to Indian Ambassador in Jakarta.
— MoFA Indonesia (@Kemlu_RI) June 6, 2022