×
Ad

ಆಟೋ ರಿಕ್ಷಾ ಪರ್ಮಿಟ್ ಸಮಸ್ಯೆ: ಅಧಿಕಾರಿಗಳೊಂದಿಗೆ ಸಭೆ

Update: 2022-06-08 20:18 IST

ಉಡುಪಿ, ಜೂ.೮: ನಗರದಲ್ಲಿ ಸಂಚರಿಸುತ್ತಿರುವ ಗ್ರಾಮಾಂತರ ಪರ್ಮಿಟ್ ಹೊಂದಿರುವ ಅಟೋ ರಿಕ್ಷಾಗಳ ತಾಂತ್ರಿಕ ಸಮಸ್ಯೆಗಳ ಪರಿಹಾರದ ಕುರಿತು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಉಡುಪಿ ನಗರದ ನಿವಾಸಿಗಳಲ್ಲಿ ಗ್ರಾಮಾಂತರ ಪರ್ಮಿಟ್ ಇದ್ದಲ್ಲಿ ನಗರದ ಪರ್ಮಿಟ್ ಅನ್ನು ಒಂದು ಬಾರಿ ನೀಡಿ ಸಕ್ರಮಗೊಳಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು, ಸಂಚಾರಿ ಪೊಲೀಸ್ ಅಧಿಕಾರಿಗಳು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News