ಇಂಡಿಗೊ ಏರ್‌ ಲೈನ್ಸ್‌ ಸಿಬ್ಬಂದಿ ವಿರುದ್ಧ ನಟಿ ಪೂಜಾ ಹೆಗ್ಡೆ ಆಕ್ರೋಶ

Update: 2022-06-10 02:18 GMT
ಪೂಜಾ ಹೆಗ್ಡೆ

ಮುಂಬೈ: ಮುಂಬೈನಿಂದ ಹೊರಟ ಇಂಡಿಗೋ ಏರ್‌ ಲೈನ್ಸ್‌ ವಿಮಾನದ ಸಿಬ್ಬಂದಿ ಬಗ್ಗೆ ನಟಿ ಪೂಜಾ ಹೆಗ್ಡೆ ಟ್ವಿಟ್ಟರ್‌ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿಗೊ ಸಿಬ್ಬಂದಿ ವರ್ತನೆ ಬಗ್ಗೆ ಟ್ವಿಟ್ಟರ್‌ ನಲ್ಲಿ ಬರೆದಿರುವ ಅವರು, "ಇಂಡಿಗೊ ಸಿಬ್ಬಂದಿಯ ಒರಟು ವರ್ತನೆ ಬಗ್ಗೆ ತೀರಾ ಬೇಸರವಾಗಿದೆ. ಮುಂಬೈನಿಂದ ಇಂದು ಹೊರಟ ವಿಮಾನದಲ್ಲಿ ವಿಪುಲ್ ನಕಾಶೆ ಎಂಬ ಸಿಬ್ಬಂದಿಯ ವರ್ತನೆ ಬೇಸರ ತರಿಸಿತು. ಅಹಂಕಾರದ, ಅಜ್ಞಾನದ ಮತ್ತು ಬೆದರಿಸುವ ಧ್ವನಿಯನ್ನು ವಿನಾಕಾರಣ ನಮ್ಮ ಜತೆ ಬಳಸಲಾಗಿದೆ. ಸಾಮಾನ್ಯವಾಗಿ ಇಂಥ ವಿಷಯಗಳನ್ನು ನಾನು ಟ್ವೀಟ್ ಮಾಡುವುದಿಲ್ಲ. ಆದರೆ ಇದು ನಿಜಕ್ಕೂ ಭಯಾನಕ" ಎಂದು ವಿವರಿಸಿದ್ದಾರೆ.

ಪೂಜಾ ಹೆಗ್ಡೆ ಮುಂಬೈನಿಂದ ಹೊರಟ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಏರ್‍ಲೈನ್ ಸಿಬ್ಬಂದಿಯ ಒರಟು ವರ್ತನೆ ಬಗ್ಗೆ ನಟಿಯರು ದೂರು ನೀಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಚಿತ್ರಾಂಗದಾ ಸಿಂಗ್ ಕೂಡಾ ಗೋ ಫಸ್ಟ್ ಏರ್‍ಲೈನ್ಸ್ ನ ಗಗನಸಖಿಯ ಒರಟು ವರ್ತನೆ ಬಗ್ಗೆ ಟ್ವೀಟ್ ಮಾಡಿದ್ದರು.‌

ಮೊಹೆಂಜೊ ದಾರೊ ಚಿತ್ರದಲ್ಲಿ 2016ರಲ್ಲಿ ಹೃತಿಕ್ ರೋಷನ್ ಜತೆ ನಟಿಸುವ ಮೂಲಕ ಬಾಲಿವುಡ್‍ನಲ್ಲಿ ಪೂಜಾ ಹೆಗ್ಡೆ ಬೆಳಕಿಗೆ ಬಂದಿದ್ದರು. ಇತ್ತೀಚಿನ ಆಚಾರ್ಯ ಚಿತ್ರದಲ್ಲೂ ಅವರು ನಟಿಸಿದ್ದು, ಚಿರಂಜೀವಿ, ರಾಮ್‍ಚರಣ್ ಮತ್ತು ಸೋನು ಸೂದ್ ಈ ಚಿತ್ರದಲ್ಲಿದ್ದಾರೆ.

ರೋಹಿತ್ ಶೆಟ್ಟಿಯವರ ಮುಂಬರುವ ಸಕ್ರ್ಯೂಸ್ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಜತೆಗೆ ಹೆಗ್ಡೆ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ನಾಯಕ ನಟರಾಗಿರುವ ಕಭಿ ಈದ್ ಕಭಿ ದಿವಾಲಿ ಚಿತ್ರದ ಚಿತ್ರೀಕರಣದ ವೇಳೆ ಕೂಡಾ ಕಾಣಿಸಿಕೊಂಡಿದ್ದಾರೆ. ಪುರಿ ಜಗನ್ನಾಥರ ಜನ ಗಣ ಮನ ಚಿತ್ರದಲ್ಲೂ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News