ತೊಕ್ಕೊಟ್ಟು: ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

Update: 2022-06-21 17:11 GMT

ಉಳ್ಳಾಲ : ರಾಹುಲ್ ಗಾಂಧಿ ಅವರಿಗೆ ಈಡಿ ಜಾರಿ, ಪ್ರವಾದಿ ಮುಹಮ್ಮದ್ ಬಗ್ಗೆ ನಿಂದನೆ ಮಾಡಿದ ನ್ಯೂಪುರ್ ಶರ್ಮಾ ಧರ್ಮ ವಿರೋಧಿ ಹೇಳಿಕೆ ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ವಿನಲ್ಲಿ ಪ್ರತಿಭಟನೆ ನಡೆಯಿತು. 

ಪ್ರತಿಭಟನೆ ಯನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು, ಬಿಜೆಪಿ ಸರ್ಕಾರ ಕಾಂಗ್ರೆಸ್ ಮುಖಂಡರನ್ನು ಗುರುತಿಸಿ ಈಡಿ ಜಾರಿ ಮಾಡುತ್ತಿದೆ. ಪ್ರಧಾನ ಮಂತ್ರಿ ಜನ ವಿರೋಧಿ ಆಡಳಿತ ನೀಡುತ್ತಿದ್ದಾರೆ ಎಂದು ಆರೋಪಿಸಿದರು‌.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಈಶ್ವರ ಉಳ್ಳಾಲ, ಮುಹಮ್ಮದ್ ಮುಕಚೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ  ಟಿ.ಎಸ್ ಅಬ್ದುಲ್ಲಾ, ಎನ್ ಎಸ್ ಕರೀಂ,ಸುರೇಖಾ , ಬಾಜಿಲ್ ಡಿಸೋಜ, ದಿನೇಶ್ ರೈ,ಮುಸ್ತಫಾ ಉಳ್ಳಾಲ, ನಾಸೀರ್ ಸಾಮಣಿಗೆ, ಸಾಧೀಕ್, ದೀಪಕ್ ಪಿಲಾರ್, ಮನ್ಸೂರ್, ರಹ್ಮಾನ್ ಕೋಡಿಜಾಲ್, ಅಬ್ದುಲ್ ಅಝೀಝ್, ಝಕರಿಯಾ, ಡೆನ್ನಿಸ್ ಡಿಸೋಜ, ಸುರೇಶ್ ಭಟ್ನಗರ್, ಹಮೀದ್ ಕಿನ್ಯ, ಈಶ್ವರ ಉಳ್ಳಾಲ, ಅಶ್ರಫ್ ಉಳ್ಳಾಲ, ಮುಹಮ್ಮದ್ ಮೋನು, ಕುಂಞಿ ಮೋನು ಉಳ್ಳಾಲ,‌ ಚಂದ್ರಿಕಾ, ಮುಹಮ್ಮದ್ ಮುಕಚೇರಿ, ಯೂಸುಫ್ ಬಾವಾ, ಸ್ವಪ್ನ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News