ಬೆಳ್ತಂಗಡಿ : ಎಸ್ಡಿಪಿಐ ನಾಯಕ ಹೈದರ್ ನಿರ್ಸಲ್ ನಿಧನ

Update: 2022-06-22 05:22 GMT

ಬೆಳ್ತಂಗಡಿ: ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ, ಎಸ್ಡಿಪಿಐ ನಾಯಕ ಹೈದರ್ ನಿರ್ಸಲ್ (55) ಹೃದಯಾಘಾತ ದಿಂದ ಬುಧವಾರ ನಿಧನರಾದರು.

ಎಸ್ಡಿಪಿಐ ಬೆಳ್ತಂಗಡಿ ತಾಲೂಕು ಸಮಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಜಮೀ‌ಯ್ಯತುಲ್ ಫಲಾಹ್ ತಾಲೂಕು ಸಮಿತಿ ಕಾರ್ಯದರ್ಶಿ, ಶಿರ್ಲಾಲು ಜುಮಾ ಮಸೀದಿಯ ಗೌರವಾಧ್ಯಕ್ಷ, ಉಜಿರೆ ಹಳೆಪೇಟೆ ಜುಮಾ ಮಸೀದಿಯ ಸದಸ್ಯರು ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News