×
Ad

ಕ್ರೇನ್‌ ಢಿಕ್ಕಿ: ಎಂಆರ್‌ಪಿಎಲ್‌ ಉದ್ಯೋಗಿ ಮೃತ್ಯು

Update: 2022-06-22 16:45 IST

ಮಂಗಳೂರು : ಕ್ರೇನ್‌ ಢಿಕ್ಕಿ ಹೊಡೆದ ಪರಿಣಾಮ ಎಂಆರ್‌ಪಿಎಲ್‌ ಉದ್ಯೋಗಿಯೋರ್ವರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ಎಂಆರ್‌ಪಿಎಲ್‌ ಉದ್ಯೋಗಿ ಕೇಶವ ಕೋಟ್ಯಾನ್‌ (40) ಎಂದು ಗುರುತಿಸಲಾಗಿದೆ.

ಕೇಶವ ಕೋಟ್ಯಾನ್‌ ಅವರು ಎಂಆರ್‌ಪಿಎಲ್‌ ಒಳಗೆ ವರ್ಕ್‌ ಶಾಪ್‌ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ರೇನ್‌ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News