ಕರಾವಳಿಯಲ್ಲಿ ಇನ್ನೂ 5 ದಿನ ಆರೆಂಜ್ ಅಲರ್ಟ್ : ಹವಾಮಾನ ಇಲಾಖೆ

Update: 2022-06-25 13:22 GMT

ಉಡುಪಿ : ಕರಾವಳಿ ಕರ್ನಾಟಕದಲ್ಲಿ ಜೂ.30ರವರೆಗೆ ಅಂದರೆ ಇನ್ನೂ ಐದು ದಿನಗಳ ಕಾಲ ಆರೆಂಜ್ ಅಲರ್ಟ್‌ನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ೧೧೫.೬ಮಿ.ಮೀ.ನಿಂ ೨೦೪.೪ಮಿ.ಮೀ. ನಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ ಎಂದು  ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ಜೂ.೨೯ರವರೆಗೆ ಬಿರುಗಾಳಿಯಿಂದ ಕೂಡಿದ ಮಳೆಯಾಗಲಿದೆ. ಗಂಟೆಗೆ ೪೦ರಿಂದ ೫೦ ಕಿ.ಮೀ. ವೇಗದ ಗಾಳಿ ಜಿಲ್ಲೆಯಲ್ಲಿ ಬೀಸಲಿದೆ. ಇದರಿಂದ ಅರಬಿಸಮುದ್ರದಲ್ಲಿ ಜೂ.೨೬ರ ಮಧ್ಯರಾತ್ರಿ ಯವರೆಗೆ ೩.೩ಮೀ.ನಿಂದ ೩.೭ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News