ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್‌ ಸ್ಥಾಪಕ ದಿನಾಚರಣೆ

Update: 2022-06-26 16:14 GMT

ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ಶಾಖೆ ಇದರ ವತಿಯಿಂದ  ಸಮಸ್ತ ಸ್ಥಾಪಕ ದಿನಾಚಾರಣೆ  ಆಚರಿಸಲಾಯಿತು.

ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಖತೀಬ್ ಬಹು ಇಸ್ಹಾಖ್ ಫೈಝಿ ದುಆ ನೆರೆವೇರಿಸಿ ಸಮಸ್ತ ಸಂದೇಶ ಪ್ರಭಾಷಣ ನಡೆಸಿದರು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನಾಟೆಕ್ಕಲ್ ಧ್ವಜಾರೋಹಣಗೈದರು, ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಹಾಜಿ ಅಬ್ದುರ್ರಹ್ಮಾನ್ ಪನೀರ್, ಎಸ್ ವೈ ಎಸ್ ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ದೇರಳಕಟ್ಟೆ ರೇಂಜ್ ಜಂ- ಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ ಬದ್ಯಾರ್, ಎಸ್ ವೈ ಎಸ್ ದೇರಳಕಟ್ಟೆ ಅಧ್ಯಕ್ಷ ಸಯ್ಯದ್ ಅಲಿ, ಉಪಾಧ್ಯಕ್ಷ ಮೊಹಮ್ಮದ್ ಪನೀರ್, ಎಸ್ ವೈ ಎಸ್ ಮಾಜಿ ಅಧ್ಯಕ್ಷ ಹಾಜಿ ಮೊಹಮ್ಮದ್ ಅಲಿ, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ ಹಾಜಿ ಅಬ್ದುಲ್ ಅಝೀಝ್, ಕೆರೀಮ್ ಡಿ., ಹನೀಫ್, ನಾಸಿರ್ ಡಿ., ಬೆಳ್ಮ ಗ್ರಾಮ ಪಂಚಾಯತ್ ಸದಸ್ಯಇಕ್ಬಾಲ್ ಹೆಚ್.ಆರ್., ಇಬ್ರಾಹಿಂ ಬದ್ಯಾರ್, ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ಶಾಖೆಯ ಅಧ್ಯಕ್ಷ ಫೈಝಲ್ ಡಿ.ಎಂ. ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಂಶಿದ್, ಎಸ್ಕೆಎಸ್ಸೆಸ್ಸೆಫ್‌ ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಹರ್ಷಾದ್, ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ಶಾಖೆಯ ಮಾಜಿ ಅಧ್ಯಕ್ಷ ನಿಯಾಝ್ ಡಿ.ಎಂ., ಅಬೂಬಕ್ಕರ್ ಪಾಲ್ದಡಿ ಮತ್ತಿತರರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News