ಕೆಂಚನೂರು: ಜಾನುವಾರು ಕೊಟ್ಟಿಗೆಗೆ ಹಾನಿ

Update: 2022-06-28 14:20 GMT

ಉಡುಪಿ, ಜೂ.28: ಸತತ ಮಳೆಯಿಂದ ಕುಂದಾಪುರ ತಾಲೂಕು ಕೆಂಚನೂರು ಗ್ರಾಮದ ರತ್ನ ಎಂಬವರ ಮನೆಯ ಜಾನುವಾರು ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದು 30 ಸಾವಿರ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ಅದೇ ರೀತಿ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಚಂದು ಪೂಜಾರಿ ಎಂಬವರ ಮನೆಯ ಮೇಲೆ ಬಾರೀ ಗಾಳಿಯ ಸಂದರ್ಭದಲ್ಲಿ ಮರವೊಂದು ಬಿದ್ದಿದ್ದು ಮನೆಗೆ ಭಾಗಶ: ಹಾನಿಯಾಗಿದೆ. 60,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಜಿಲ್ಲೆಗೆ ಮುಂಗಾರು ಕಾಲಿರಿಸಿ ಹಲವು ದಿನಗಳು ಕಳೆದರೂ, ಇನ್ನೂ ಮಳೆ ನಿರಂತರವಾಗಿ ಬೀಳುತ್ತಿಲ್ಲ. ಹೀಗಾಗಿ ಬೇಸಾಯ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದ್ದು, ಬಿತ್ತನೆ ಕಾರ್ಯ ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಾರಂಭಗೊಂಡಿಲ್ಲ. ಹೀಗಾಗಿ ಭತ್ತದ ನಾಟಿ ಕಾರ್ಯ ವಿಳಂಬಗೊಳ್ಳುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News