ಸುಹಾನ ಸಯ್ಯದ್‌ಗೆ ಕಾವ್ಯ ಭೂಷಣ ಪ್ರಶಸ್ತಿ

Update: 2022-06-29 17:29 GMT

ಮಂಗಳೂರು: ತನುಶ್ರೀ ಪ್ರಕಾಶನ ಸಂಸ್ಥೆ ಸೊಲೇನಹಳ್ಳಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡಮಾಡುವ ಕಾವ್ಯ ಭೂಷಣ ಪ್ರಶಸ್ತಿಗೆ ಸುಹಾನ ಸಯ್ಯದ್ ಎಂ ಆಯ್ಕೆಯಾಗಿದ್ದಾರೆ.

ಇವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನವಪರ್ವ ಫೌಂಡೇಶನ್ ಬಿಡುಗಡೆಗೊಳಿಸಿದ 'ಪತಂಗ ಪರ್ವ' 'ಮರೆಯಲಾಗದ ಪಯಣ', ಕರುನಾಡ ಹಣತೆ ಬಿಡುಗಡೆಗೊಳಿಸಿದ 'ಮಧುರ ಮೈತ್ರಿ' ಕವನ ಸಂಕಲನ ಮತ್ತು ನೂರಕ್ಕೂ ಹೆಚ್ಚು ಇಂಗ್ಲೀಷ್ ಸಂಪಾದನಾ ಕೃತಿಗಳಲ್ಲಿ ಸಹ ಬರಹಗಾರರಾಗಿದ್ದಾರೆ.

'Pinacchio' ಎಂಬ ಇಂಗ್ಲೀಷ್ ಸಂಪಾದನಾ ಕೃತಿಯನ್ನು ಹೊರ ತಂದಿದ್ದಾರೆ. ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.  ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ನೀಡುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೇ ಇಗ್ನೋ (IGNOU) ದಲ್ಲಿ ಎಂ.ಎ ಇನ್ ಇಂಗ್ಲಿಷ್ ಪದವಿ ಮುಗಿಸಿದ್ದಾರೆ. ಪ್ರಸ್ರುತ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ತಾಲೂಕಿನ ಮುಕ್ವೆ ನಿವಾಸಿ ದಿ. ಸಯ್ಯದ್ ಶುಕೂರ್ ಮತ್ತು ಶಿರೀನ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News