​ರೈಲಿನಿಂದ ಬಿದ್ದು ಮೃತ್ಯು

Update: 2022-07-15 15:55 GMT

ಕೋಟ: ಮುಂಬಯಿಯಿಂದ ಮಂಗಳೂರಿನತ್ತ ತೆರಳುತಿದ್ದ ಕೊಂಕಣ ರೈಲಿನಿಂದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ಕೆದೂರು ಗ್ರಾಮದಲ್ಲಿ ಘಟಿಸಿದೆ. ಕೆದೂರು ರೈಲ್ವೆ ಹಳಿಯ ಪಶ್ಚಿಮ ಬದಿಯ ನೀರಿನಲ್ಲಿ ತೋಡಿನಲ್ಲಿ ಗಂಡಸಿನ ಈ ಶವ ಪತ್ತೆಯಾಗಿದೆ.

ಮೃತರನ್ನು ಮಂಗಳೂರು ಡೊಂಗ್ರೆಕೆರೆ ನಿವಾಸಿ ನಿತ್ಯಾನಂದ ಶೇಟ್ ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುತಿದ್ದ ಇವರು ಇಂದು ಬೆಳಗಿನ ಜಾವ ೧:೦೦ರಿಂದ ೮:೧೫ರ ಮಧ್ಯಾವಧಿಯಲ್ಲಿ ಅಕಸ್ಮಿಕವಾಗಿ ಅಥವಾ ಬೇರೆ ಕಾರಣಕ್ಕಾಗಿ ಕೆಳಗೆ ಬಿದ್ದು, ತಲೆಯ ಹಿಂಬದಿಗಾದ ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News