ಹೊಸಕಾಡು-ಪದ್ಮನೂರು ಸಂಪರ್ಕಿಸುವ ರಸ್ತೆಗೆ ಗ್ರಾಮ ಪಂಚಾಯತ್ ಮುಕ್ತಿ

Update: 2022-07-16 13:59 GMT

ಮುಲ್ಕಿ, ಜು. 16: ಮಂಗಳೂರು ತಾಲೂಕಿನ ಕೆಮ್ರಾಲ್ ಗ್ರಾಮ‌‌ಪಂಚಾಯತ್ ವ್ಯಾಪ್ತಿಯ ಹೊಸ ಕಾಡು-  ಪದ್ಮನೂರು ಸಂಪರ್ಕಿಸುವ ರಸ್ತೆಗೆ ಗ್ರಾಮ ಪಂಚಾಯತ್ ಮುಕ್ತಿ ನೀಡಿದೆ.

ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆನೀರು ರಸ್ತೆಯಲ್ಲಿ ಹರಿದು ರಸ್ತೆಗಳಲ್ಲಿ ಬೃಹದಾಕಾರದ ಹೊಂಡಗಳು ಬಿದ್ದಿರುವ ಕುರಿತು ʼವಾರ್ತಾಭಾರತಿʼ ವರದಿ ಮಾಡಿತ್ತು.

ವಾರ್ತಾಭಾರತಿ ವರದಿಯ ಬಳಿಕ ಎಚ್ಚೆತ್ತ ಕೆಮ್ರಾಲ್ ಗ್ರಾಮ ಪಂಚಾಯತ್ ಶನಿವಾರ, ಜೆಸಿಬಿ ಬಳಸಿಕೊಂಡು ರಸ್ತೆ ಹಾಗೂ ಚರಂಡಿಯನ್ನು ದುರಸ್ತಿ ಗೊಳಿಸಿದೆ. ಆದರೆ ದುರಸ್ತಿ ಕಾಮಗಾರಿಯಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿರುವ ಅಪಾಯ ಆಹ್ವಾನಿಸುತ್ತಿರುವ ತೆರೆದ ಮೋರಿ ಹಾಗೂ ರಸ್ತೆಯಲ್ಲಿ ಹರಿಯುತ್ತಿರುವ ನೀರಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಕುರಿತು ಗ್ರಾಮ ಪಂಚಾಯತ್ ಶೀಘ್ರ ಸೂಕ್ತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News