ಬಂಟ್ವಾಳ: ಸಿಪಿಐ ದ.ಕ.ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ

Update: 2022-07-18 15:52 GMT

ಬಂಟ್ವಾಳ, ಜು.18: ಸಿಪಿಐ ದ.ಕ.ಜಿಲ್ಲಾ 24ನೇ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮವು ಬಂಟ್ವಾಳದ ಕಾ.ಎ.ಶಾಂತಾರಾಮ್ ಪೈ ಸ್ಮಾರಕ ಭವನದಲ್ಲಿ ಸೋಮವಾರ ನಡೆಯಿತು.

ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ 75 ವರ್ಷದ ಹಿಂದೆ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಲು ಈಗಲೂ ಹೋರಾಟ ನಡೆಯುತ್ತಲೇ ಇದೆ. ಜನಸಾಮಾನ್ಯರು ಬದುಕುವ ಹಕ್ಕಿಗಾಗಿ ಹೋರಾಡುತ್ತಲೇ ಇದ್ದಾರೆ. ದೇಶಕ್ಕಾಗಿ ಹೋರಾಟ ಮಾಡಿದವರನ್ನು ಮೂಲೆಗುಂಪು ಮಾಡಿ ಬ್ರಿಟಿಷರ ಪರ ಕೆಲಸ ಮಾಡಿದವರನ್ನು ಸ್ವಾತಂತ್ರ ಹೋರಾಟಗಾರರು ಎಂದು ಬಿಂಬಿಸಲಾಗುತ್ತಿದೆ. ಸಮಾಜ ಸುಧಾರಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಕೋಮುಪರ ಭಾವನೆಗಳನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತಲಾಗುತ್ತಿದೆ. ಇತಿಹಾಸವನ್ನು ತಿರುಚುವ ಕ್ರಿಮಿನಲ್ ಸಂಸ್ಥೆಗಳು ಮೇಲೈಸುತ್ತಿದೆ ಎಂದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್.ಬೆರಿಂಜ, ಸಮ್ಮೇಳನದ ಸಿದ್ಧತಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಶೇಖರ್, ಸಂಚಾಲಕ ಬಾಬು ಭಂಡಾರಿ, ಎಐಟಿಯುಸಿ ಜಿಲ್ಲಾ ನಾಯಕ ಕರುಣಾಕರ ಮಾರಿಪಳ್ಳ, ಎಐವೈಎಫ್ ನಾಯಕ ಶ್ರೀನಿವಾಸ ಭಂಡಾರಿ, ಸಿಪಿಐ ನಾಯಕರಾದ ಪ್ರೇಮನಾಥ, ಸರೋಜಿನಿ ಕುರಿಯಾಳ, ಹರ್ಷಿತ್ ಬಂಟ್ವಾಳ, ಕೇಶವತಿ ಕುರಿಯಾಳ, ಶಮಿತಾ ಕಲ್ಲಡ್ಕ, ಮೋಹನ ಅರಳ, ಎಂ ಬಿ ಭಾಸ್ಕರ, ಚಂದಪ್ಪನಾವೂರು ಉಪಸ್ಥಿತರಿದ್ದರು.

ಸಿಪಿಐ ಜೊತೆ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News