ಮುಂಬೈ: ಕುಖ್ಯಾತ ಭೂಗತ ಪಾತಕಿ ವಿಕ್ರಾಂತ್ ಬಂಧನ

Update: 2022-07-31 17:49 GMT

ಪಣಜಿ, ಜು. 31: ಮೂವತ್ತಕ್ಕೂ ಅಧಿಕ ಹೇಯ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾದ ಮುಂಬೈಯ ಕುಖ್ಯಾತ ಕ್ರಿಮಿನಲ್‌ನನ್ನು ಮುಂಬೈ ಕ್ರೈಮ್ ಬ್ರಾಂಚ್‌ನೊಂದಿಗೆ ಗೋವಾ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಪಣಜಿ ಪಟ್ಟಣ ಪೊಲೀಸ್ ಠಾಣೆ ಹಾಗೂ ನವಿ ಮುಂಬೈ ಕ್ರೈಮ್ ಬ್ರಾಂಚ್ ತಡ ರಾತ್ರಿ ಕಾರ್ಯಾಚರಣೆ ನಡೆಸಿ ಮುಂಬೈಯ ಕುಖ್ಯಾತ ಕ್ರಿಮಿನಲ್ ಎಂದು ಹೇಳಲಾದ ವಿಕ್ರಾಂತ್ ಆಲಿಯಾಸ್ ವಿಕ್ಕಿ ದತ್ತಾತ್ರೇಯ ದೇಶಮುಖ್‌ನನ್ನು ಬಂಧಿಸಿದೆ ಎಂದು ಉತ್ತರ ಗೋವಾ ಪೊಲೀಸ್ ಅಧೀಕ್ಷಕ ಶೋಬಿತ್ ಸಕ್ಸೇನಾ ಅವರು ಹೇಳಿದ್ದಾರೆ. 

ವಿಕ್ರಾಂತ್ ವಿರುದ್ಧ ಮಹಾರಾಷ್ಟ್ರದಲ್ಲಿ 30ಕ್ಕೂ ಅಧಿಕ ಗಂಭೀರ ಪ್ರಕರಣಗಳು ದಾಖಲಾಗಿವೆ. ಹತ್ಯೆ ಹಾಗೂ ಎಂಸಿಒಸಿಎ ಪ್ರಕರಣಕ್ಕೆ ಸಂಬಂಧಿಸಿ ಈತ ಮುಂಬೈಯ ನೆರುಲ್ ಪೊಲೀಸ್ ಠಾಣೆಗೆ ಬೇಕಾದವನಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.  
ಆರೋಪಿಯಿಂದ ದೇಶಿ ನಿರ್ಮಿತ ಪಿಸ್ತೂಲ್, ಐದು ಸುತ್ತ ಗುಂಡು, ಕಾಟ್ರಿಜ್, ಮೊಬೈಲ್ ಫೋನ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News