ಪೊಲೀಸ್‌ಗೆ ಹಲ್ಲೆ ಆರೋಪ: ರಿಕ್ಷಾ ಚಾಲಕ ಸೆರೆ

Update: 2022-08-09 18:21 GMT

ಮಂಗಳೂರು, ಆ.9: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಕರ್ತವ್ಯ ನಿರತ ಪೊಲೀಸ್‌ಗೆ ರಿಕ್ಷಾ ಚಾಲಕನೊಬ್ಬ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂಬ ಆರೋಪದ ಮೇರೆಗೆ ಚಾಲಕನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಮಂಗಳಾದೇವಿ ಸಮೀಪದ ಅಮರ ಆಳ್ವ ರಸ್ತೆ ನಿವಾಸಿ ವಿನೋದ್ ಪೂಜಾರಿ (48) ಹಲ್ಲೆ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಂಡೇಶ್ವರ ಠಾಣೆಯ ಹೊಯ್ಸಳ ಪೊಲೀಸರು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ತೆರಳುತ್ತಿದ್ದಾಗ ಆರೋಪಿ ವಿನೋದ್ ಪೂಜಾರಿ
ರಸ್ತೆಗೆ ಅಡ್ಡವಾಗಿ ರಿಕ್ಷಾ ನಿಲ್ಲಿಸಿದ ಎನ್ನಲಾಗಿದೆ. ಇದನ್ನು ಕಂಡು ಹೆಡ್ ಕಾನ್‌ಸ್ಟೇಬಲ್ ಚಂದಪ್ಪ ರಿಕ್ಷಾ ತೆರವು ಮಾಡಲು ಸೂಚಿಸಿದಾಗ ಪಾನಮತ್ತನಾಗಿದ್ದ ಆರೋಪಿಯು ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಸಾರ್ವಜನಿಕರ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಚಂದಪ್ಪ ನೀಡಿದ ದೂರಿನ ಮೇಲೆ ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News