ಆ.16ರಿಂದ ಬಿಸಿಯೂಟ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

Update: 2022-08-14 11:35 GMT
ಸಾಂದರ್ಭಿಕ ಚಿತ್ರ

ಉಡುಪಿ : ಶಾಲಾ ಕಾಲೇಜುಗಳಲ್ಲಿ ನಿರಂತರ ವಿದ್ಯಾರ್ಥಿಗಳಿಗೆ ಬಿಸಿ ಯೂಟ ಮಾಡಿ ಸೇವೆ ನೀಡುವ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ವು  ಆ.16ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ನೌಕರರಿಗೆ ಮೂರು ತಿಂಗಳಿಂದ ಸರಕಾರ ಕನಿಷ್ಠ ಸಂಬಳವಾಗಿರುವ ೨೭೦೦ ರೂ. ಪಾವತಿ ಮಾಡದೇ ಇರುವುದು, ಶಾಲೆಗಳಲ್ಲಿ ೧೫-೨೦ ವರ್ಷಗಳು ಅಡುಗೆ ಮಾಡಿ ಸೇವೆ ಸಲ್ಲಿಸಿದ ೬೦ ವಯಸ್ಸಿನ ೬೦೦೦ ತಾಯಂದಿರನ್ನು ಯಾವುದೇ ಪರಿಹಾರ ನೀಡದೇ ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದು ಹಾಗೂ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವುದನ್ನು ಬಿಡುಗಡೆ ಮಾಡದೆ ವಂಚಿಸಿರುವು ದನ್ನು ವಿರೋಧಿಸಿ ಆ.೧೬ರಂದು ವಿಧಾನ ಸೌಧ ಚಲೋದಲ್ಲಿ ನಡೆಸಿ ಧರಣಿ ಮುಷ್ಕರ ಹೂಡಲಾಗುವುದು ಎಂದು ನೌಕರರ ಸಂಘದ ಅಧ್ಯಕ್ಷೆ ಜಯಶ್ರಿ, ಕಾರ್ಯದರ್ಶಿ ಸಿಂಗಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News