ಕಾನ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಣೆ

Update: 2022-08-15 10:56 GMT

ಸುರತ್ಕಲ್, ಆ.15: ಇಲ್ಲಿಗೆ ಸಮೀಪದ ಕಾನ ಬದ್ರಿಯಾ ಮಸ್ಜಿದ್ ಮತ್ತು ಮದ್ರಸದ ವತಿಯಿಂದ ಸ್ವಾತಂತ್ರ್ಯ ಅಮೃತಮಹೋತ್ಸವ  ಕಾರ್ಯಕ್ರಮ ನಡೆಯಿತು.

ಜಮಾಅತ್ ಅಧ್ಯಕ್ಷ ಮುಹಮ್ಮದ್ ಶೆಡ್ಯ ಧ್ವಜಾರೋಹಣ ನೆರವೇರಿಸಿದರು. ಪ್ರಾರ್ಥನೆ ಗೈದು ಮಾತನಾಡಿದ ಮಸೀದಿ ಧರ್ಮಗುರುಗಳಾದ ಹುಸೈನ್ ಸಅದಿ ಹೊಸ್ಮಾರ್ ಮಾತನಾಡಿದರು.

ಮದ್ರಸಾ ಮುಖ್ಯ ಅಧ್ಯಾಪಕ ಹಕೀಂ ಸಖಾಫಿ, ಅಧ್ಯಾಪಕರಾದ ಅಲೀ‌ ಸಅದಿ, ಫಾರೂಕ್ ಝೈನಿ, ಮಸೀದಿ ಸಮಿತಿಯ ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್, ಮಾಜಿ ಅಧ್ಯಕ್ಷರಾದ ಅಶ್ರಫ್ ಬದ್ರಿಯ್ಯಾ, ಅಬೂಬಕರ್, ಉಪಾಧ್ಯಕ್ಷ ಎಸ್. ಎಚ್. ಅನ್ಸಾರಿ, ಸದಸ್ಯರಾದ ಯಾಕೂಬ್, ಶರೀಫ್, ಸಿರಾಜ್, ಲತೀಫ್, ಸಫ್ವಾನ್, ಇರ್ಶಾದ್, ಅಶ್ರಫ್, ಉಮರ್, ಉಸ್ಮಾನ್, ಸಕಿಲ್, ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News