ಮಂಗಳೂರು ಬಂದರ್ ಅಲ್‌ಅಝ್ಹರಿಯ್ಯ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 13:36 GMT

ಮಂಗಳೂರು: ಬಂದರ್‌ನ ಅಲ್‌ಅಝ್ಹರಿಯ್ಯ ಮದ್ರಸದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ನೆರವೇರಿಸಿದರು.

ಅಲ್‌ಅಝ್ಹರಿಯ್ಯದ ಮುದರ್ರಿಸ್ ಹೈದರ್ ಮದನಿ ದುಆಗೈದರು. ಆಡಳಿತ ಸಮಿತಿಯ ಸದಸ್ಯರಾದ ಫಝಲ್ ಹಾಜಿ, ಅಬ್ದುಲ್ ಖಾದರ್ ಹಾಜಿ, ರಿಯಾಝುದ್ದೀನ್ ಹಾಜಿ, ಝಿಯಾಝ್ ಹಾಜಿ ಕಚ್‌ಮನೆ, ಅಶ್ರಫ್ ಹಾಜಿ ಕಾಯರ್ಕಾನ, ಅಧ್ಯಾಪಕ ಶಾಫಿ ಮಿಸ್ಬಾಹಿ, ಸ್ಥಳೀಯರಾದ ಅಬ್ದುಲ್ ಲತೀಫ್ ಮದನಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News