ಎಸ್‌ವೈ‌ಎಸ್, ಎಸ್ಸೆಸ್ಸೆಫ್‌ ಬೆಳರಿಂಗೆ ಶಾಖೆಯಿಂದ ಸ್ವಾತಂತ್ರೋತ್ಸವ, ಸನ್ಮಾನ ಕಾರ್ಯಕ್ರಮ

Update: 2022-08-16 06:03 GMT

ಮಂಗಳೂರು, ಆ.16: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಎಸ್‌ವೈ‌ಎಸ್ ಹಾಗೂ ಎಸ್ಸೆಸ್ಸೆಫ್‌ ಬೆಳರಿಂಗೆ ಶಾಖೆಯ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಎಸ್‌ವೈಎಸ್ ರಾಜ್ಯ ನಾಯಕ ಕೆ.ಎಚ್.ಇಸ್ಮಾಯೀಲ್ ಸಅದಿ ಧ್ವಜಾರೋಹಣ ನೆರವೇರಿಸಿದರು. ಎಸ್‌ವೈಎಸ್ ಬೆಳರಿಂಗೆ ಶಾಖೆಯ ಅಧ್ಯಕ್ಷ ವಿ.ಎ.ಮುಹಮ್ಮದ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟದ ಬಗ್ಗೆ  ಪಂಚಾಯತ್ ಸದಸ್ಯ ಫಾರೂಕ್ ಮಾತನಾಡಿದರು.

ಇದೇ ಸಂದರ್ಭ  2021-22ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ  ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಫಯಾಝ್, ಎಸ್‌‌ವೈಎಸ್ ಕಿನ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಸಾಗ್, ಕೆಸಿಎಫ್ ನಾಯಕರಾದ ಶೌಕತ್ ತ್ವಾಯಿಫ್, ಮೂಸಾ ಖತರ್, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಸಾದಿಕ್, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ನೌಮಾನ್ ಕೂಡಾರ, ಸಿದ್ದೀಕ್ ಕೂಡಾರ, ಎಸ್‌ವೈಎಸ್ ಬೆಳರಿಂಗೆ ಪ್ರಧಾನ ಕಾರ್ಯದರ್ಶಿ ಹನೀಫ್, ಅಝೀಝ್ ಸಾಗ್, ಮೂಸಾ ಬದ್ರಿಯ ನಗರ ಮತ್ತಿತರರು ಉಪಸ್ಥಿತರಿದ್ದರು.

ಯೂನಿಟ್ ನ ಅಧ್ಯಕ್ಷ ಬಶೀರ್ ಕೂಡಾರ ಸ್ವಾಗತಿಸಿದರು. ಯೂನಿಟ್ ನ ಪ್ರಧಾನ ಕಾರ್ಯದರ್ಶಿ ನೌಫಲ್ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News