ಎಸ್ಸೆಸ್ಸೆಫ್ ಬಜ್ಪೆ: ಸ್ವಾತಂತ್ರ್ಯ ಪ್ರಯುಕ್ತ ಪೀಸ್ ಕಾನ್ಫರೆನ್ಸ್

Update: 2022-08-16 10:33 GMT

ಬಜ್ಪೆ, ಆ.16: ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪೀಸ್ ಕಾನ್ಫರೆನ್ಸ್ ಸೌಹಾರ್ದ ಸಭೆಯು ಬಜ್ಪೆ ಕಿನ್ನಿಪದವು ಜಂಕ್ಷನಿನಲ್ಲಿ ನಡೆಯಿತು.

 'ನಮ್ಮೊಳಗೆ ಗೋಡೆ ಕಟ್ಟಿದ್ದು ಯಾರು?' ಎಂಬ ವಿಷಯದಲ್ಲಿ ವಿವಿಧ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ವಿಚಾರಗೋಷ್ಠಿ ನಡೆಯಿತು. ಸೆಕ್ಟರ್ ಅಧ್ಯಕ್ಷ ಶಾಕಿರ್ ಎಂಎಸ್ಇ ಅಧ್ಯಕ್ಷತೆ ವಹಿಸಿದ್ದರು.

ಮುಸ್ಲಿಮ್ ಧಾರ್ಮಿಕ ವಿದ್ವಾಂಸ ಉಸ್ಮಾನ್ ನಿಝಾಮಿ ಬಜ್ಪೆ, ಸಾಮಾಜಿಕ ಮುಖಂಡ ಡಾ.ಶೇಖರ ಪೂಜಾರಿ ಬಜ್ಪೆ, ರೋಟರಿ ಕ್ಲಬ್ ಮುಖಂಡ ಸಾಮಾಜಿಕ ಹೋರಾಟಗಾರ ರಾಬರ್ಟ್ ಫ್ರಾಂಕ್ಲಿನ್ ರೇಗೋ ಬಜ್ಪೆ ಮುಂತಾದವರು ಸಂದೇಶ ಭಾಷಣ ಮಾಡಿದರು.

ವೇದಿಕೆಯಲ್ಲಿ ಎಸ್‌ವೈಎಸ್ ಬಜ್ಪೆ ಸೆಂಟರ್ ಅಧ್ಯಕ್ಷ ಹನೀಫ್ ಹಾಜಿ ಬಜ್ಪೆ, ಎಸ್‌ಎಂಎ ಮುಖಂಡ ಸಲೀಲ್ ಹಾಜಿ ಬಜ್ಪೆ, ಎಸ್‌ವೈಎಸ್ ಮುಖಂಡರಾದ ಅಬೂಬಕರ್ ಹಾಜಿ ಬಜ್ಪೆ, ಬಶೀರ್ ಅಲ್ ರಫಾ ಬಜ್ಪೆ, ಸ್ವಾಲಿಹ್ ಕೊಳಂಬೆ, ಎಂ.ಎಚ್.ಹನೀಫ್ ಕಿನ್ನಿಪದವು, ಮುಹಮ್ಮದ್ ಅಲಿ ತಾರಿಕಂಬಳ, ಉಮರ್ ಮುಸ್ಲಿಯಾರ್ ಬಜ್ಪೆ, ಕೆಸಿಎಫ್ ಮುಫೀದ್ ಬಜ್ಪೆ, ಎಸ್ಸೆಸ್ಸೆಫ್ ದ‌ಅವಾ ಕಾರ್ಯದರ್ಶಿ ಉಮರುಲ್ ಫಾರೂಕ್ ಹನೀಫಿ ಬಜ್ಪೆ ಸ್ವಾಲಿಹ್ ಎಂ.ಎಸ್.ಮನ್ಸೂರ್ ಬಜ್ಪೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News