ಬೈಂದೂರು: ಮಸೀದಿ, ಮದರಸಗಳಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Update: 2022-08-16 12:14 GMT

ಬೈಂದೂರು, ಆ.16: ತಾಲೂಕಿನ ವಿವಿಧ ಮಸೀದಿ, ಮದರಸಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯೊತ್ಸವವನ್ನು ಎಲ್ಲಾ ಧರ್ಮದವರ ಮುಖಂಡರನ್ನು ಆಹ್ವಾನಿಸಿ ಸಂಭ್ರಮದಿಂದ ಆಚರಿಸಲಾಯಿತು.

ನಾವುಂದ ಮೊಹಿದ್ದಿನ್ ಮಸೀದಿ, ನಾಗೂರು ನೂರ್ ಮಸೀದಿ, ಹಳಗೇರಿ ಜಾಮೀಯ ಮಸೀದಿ, ಗುಂಜಾನಗುಡ್ಡೆ ಮೊಹಮ್ಮದೀಯ ಮದರಸಾ, ಬೈಂದೂರು ಅಂಜುಮನ್ ಶಬಾಬುಲ್ ಇಸ್ಲಾಮ್ ವೆಲ್ಫೇರ್ ಟ್ರಸ್ಟ್,  ಬೈಂದೂರು ಮೊಹಮದೀಯ ಮದರಸ, ಯೋಜನಾ ನಗರದ ಸಯ್ಯದಾ  ಹಝಾನಿ ಐಶಾ ಮದರಸ, ಹಡವಿನಕೋಣೆ  ಫುರ್ಖಾನಿಯ ಮದರಸ, ಹಡವಿಣಕೋಣೆ ಮಿಫ್ತಾಹುಲ್ ಉಲುಮ್ ಮದರಸ, ಕೇಸರಕೋಡಿ ರೌನಾಕುಲ್ ಇಸ್ಲಾಮ್ ಮದರಸಾ ಹಾಗೂ ವಿವಿಧ ಮಸೀದಿ ಮದರಸಗಳಲ್ಲಿ  ಧ್ವಜಾರೋಹಣ ನೆರವೇರಿಸಲಾಯಿತು.

ಈ ವೇಳೆ ಮಸೀದಿಯ ಉಲೆಮಾಗಳು ಸ್ವಾತಂತ್ರ್ಯ ಹೋರಾಟದ ಇತಿಹಾಸ ವನ್ನು ಯುವಕರಿಗೆ ತಿಳಿಸಿ ದೇಶಪ್ರೇಮದ ಸಂದೇಶ ನೀಡಿದರು. ಮದರಸಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News